Friday, November 22, 2013

About shree Akhila Havyaka Mahasabha (R) Bangalore ..... ( part 3 )

About shree Akhila Havyaka Mahasabha (R) Bangalore ..... ( part 3 )


ಒಬ್ಬರು ಹಿತೈಷಿ ಮಿತ್ರರು ಮಾತನಾಡುತ್ತಾ ಈ ರೀತಿ ವಿವಿಧ ಮಾಹಿತಿ ಮತ್ತು ವಿಚಾರಗಳನ್ನು ಹೊಂದಿರುವ ನೀವು ನ್ಯಾಯಾಲಯದಲ್ಲಿ ದಾವೆ ಹೂಡಬಹುದಲ್ಲವೇ ?, ಎಂದು ಪ್ರಶ್ನಿಸಿದರು . ಅವರ ಪ್ರಶ್ನೆಗೆ ನಾನು ನೀಡಿದ ಸಮಜಾಯಿಷಿಯ ಸಾರ ಹೀಗಿದೆ. 



೧. ಯಾವುದೇ ಸಂಘಟನೆ , ಸಾರ್ವಜನಿಕ ಸಂಸ್ಥೆಗಳ ಪ್ರಮುಖ ಸ್ಥಾನಗಳಲ್ಲಿ ಕುಳಿತವರು ತಮ್ಮ ಕಾರ್ಯಗಳನ್ನು, ಸರಿಯೋ ತಪ್ಪೋ ಆ ವಿಚಾರ ಬೇರೆ , ಸಮರ್ಥಿಸಿಕೊಳ್ಳಲು ಸಂಸ್ಥೆಯ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ವಿಧಿ ವಿಧಾನಗಳ ಪ್ರಕಾರ ಅವರಿಗೆ ಬೇಕಿರುವದು ಆಡಳಿತ ಮಂಡಳಿಯ ಸದಸ್ಯರುಗಳ ಸಹಯೋಗವಷ್ಟೇ. ಸರಿಯಲ್ಲದ ಕೆಲಸಗಳಿಗೆ, ವಿಧಾನಗಳಿಗೆ ಸಹಯೋಗನೀಡಿದವರು ತಮ್ಮ ನಿರ್ಣಯಗಳ ಸಮರ್ಥನೆಗೆ ಸಂಸ್ಥೆಯ ಹಣವನ್ನು ನೀರಿನಂತೆ ಖರ್ಚು ಮಾಡುವದು ಎಲ್ಲೆಡೆ ಕಂಡುಬರುವ ಸಹಜ ಬೆಳವಣಿಗೆಗಳು. ಸಮಾಜ ಸೇವಾ ಸಂಸ್ಥೆಗಳಿಗೆ, ಅದರಲ್ಲೂ ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಬರುವ ಹಣ , ಸಮಾಜ ಬಂಧುಗಳು ಬಹಳ ವರ್ಷ ಪರಿಶ್ರಮ ಮಾಡಿ ತಾವು ಕೂಡಿಟ್ಟ ಹಣ . ಸಮಾಜ ಮುಖಿ ಚಟುವಟಿಕೆಗಳು ವೃದ್ಧಿ ಕಾಣಲಿ , ಹತ್ತಾರು ಅಸಹಾಯಕರಿಗೆ ಸಹಾಯವಾಗಲಿ, ತಾವು ಜೀವನದಲ್ಲಿ ಪರಿತಪಿಸಿದ ವಿವಿಧ ಹಂತಗಳು ನಮ್ಮ ಸಮಾಜದ ಯುವ ಜನಾಂಗಗಳಿಗೆ ಬಾರದಿರಲಿ ಎಂಬ ವಿವಿಧ ಉದಾತ್ತ ಧ್ಯೇಯೋದ್ದೇಶಗಳಿಗೆ ನೀಡುವ ಹಣ ಕಾರ್ಯಕಾರಿ ಮಂಡಳಿಯಿಂದ ಯಾವುದೋ ವ್ಯರ್ಥ ಖರ್ಚುಗಳಿಗೆ ವ್ಯಯವಾಗಬಾರದಲ್ಲ. ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿರ್ಣಯಗಳನ್ನು ಪ್ರಶ್ನಿಸಿ ಕೋರ್ಟು, ಕಛೇರಿಗಳ ಕದ ತಟ್ಟಿದರೆ ಆಡಳಿತ ನಡೆಸುವವರಿಗೆ ಇನ್ನೊಂದು ಹಬ್ಬ. ಕಚೇರಿಯ ಖರ್ಚು, ಟೇಬಲ್ ಕೆಳಗಿನ ಖರ್ಚು, ವಕೀಲರ ಖರ್ಚು, ಮಧ್ಯವರ್ತಿಗಳ ಖರ್ಚು ಹೀಗೆ ಪಟ್ಟಿ ಬೆಳೆಯುತ್ತ ಹೋಗುವದು ತಾನೇ? ಈ ಎಲ್ಲ ಖರ್ಚು ಗಳ ಜೊತೆ ತಮ್ಮ ಜೇಬಿಗಿಷ್ಟು ಸೇರಿಸಿ ವೋಚರ್ ಬರೆದು ತಮ್ಮ ಸಾಲಿನಲ್ಲಿ ಸೇರುವ ಸಂಖ್ಯಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ನಾವೇ ಅವಕಾಶ ನಿರ್ಮಿಸಿದಂತಾಗುವದು ತಾನೇ? ಸದಸ್ಯನೊಬ್ಬ ಐದು ಸಾವಿರ ರೂಪಾಯಿ ಖರ್ಚು ಮಾಡಿ ಹೈಕೋರ್ಟ್ ರಿಟ್ ಹಾಕಿದರೆ , ಆಡಳಿತ ಮಂಡಳಿಯವರು ರಾಮ್ ಜೇಟ್ ಮಲಾನಿಯಂತಹ ವಕೀಲರಿಗೆ ಐವತ್ತು ಸಾವಿರ ರೂಪಾಯಿ ಸಂಸ್ಥೆಯ ಹಣ ಖರ್ಚು ಮಾಡಿ , ಕೇಸ್ ಗೆಲ್ಲುವ ಪ್ರಯತ್ನ ಮಾಡುವರು. ಗೊತ್ತಲ್ಲ ಗಾದೆ, ಗೆದ್ದವ ಸೋತ - ಸೋತವ ಸತ್ತ . ಕೊನೆಯಲ್ಲಿ ಒಟ್ಟಾರೆ ಫಲಿತಾಂಶ - ಬೆವರು ಸುರಿಸಿ, ಕೂಡಿಟ್ಟು ದಾನ ನೀಡಿದ ಸಮಾಜ ಬಾಂಧವರ ಹಣ - ಹುಚ್ಚನ ಮದುವೆಯಲಿ ಉಂಡವನೇ ಜಾಣ . 


೨. ಅದಕ್ಕೇ ಎಲ್ಲ ಸಂಘಟನೆಗಳ ಯಶಸ್ಸಿನ ಸಾರವೆಂದರೆ ಸಾಮಾನ್ಯ ಸದಸ್ಯ ಸದಾ ಜಾಗ್ರತವಾಗಿರಬೇಕು. ಯಾವುದೇ ನಿರ್ಣಯವನ್ನು ಹತ್ತಾರು ಕೋನಗಳಿಂದ ವಿಮರ್ಶಿಸುವ ಜಿಜ್ಞಾಸೆ ಹೊಂದಿರಬೇಕು. ಲಕ್ಷ ಕೊಟ್ಟವರಿರಲಿ, ಸಾವಿರ ಕೊಟ್ಟವರಿರಲಿ ಹಣದ ಬೆಲೆ ಗಳಿಸಿದವನಿಗೆ, ಹಣ ಗಳಿಸಲು ಪ್ರಯತ್ನಿಸುವವನಿಗೆ ಮಾತ್ರ ಅರಿವಿರುತ್ತದೆ. ಹಣವುಳ್ಳವರೆಲ್ಲ ದಾನಿಗಳಾಗುವದಿಲ್ಲ, ದಾನಿಗಳ ಹಣ ವ್ಯರ್ಥವಾದರೆ , ಹಣವುಳ್ಳವರು ದಾನಿಗಳಾಗಲು ಹಿಂಜರಿಕೆ ತೋರುತ್ತಾರೆ. ಸಾಮಾನ್ಯ ಸದಸ್ಯ ಜಿಜ್ನಾಸುವಾದರೆ, ಆಡಳಿತ ನಡೆಸುವವರು ಸದಾ ಜಾಗ್ರತರಾಗಿರುತ್ತಾರೆ. ಸಾಮಾನ್ಯ ಸದಸ್ಯ ಸೋತರೆ, ಆಡಳಿತ ನಡೆಸುವವರಿಗೆ ಚುನಾವಣೆ ಬಂದೊದಗಿದಾಗ ವ್ಯೂಹ ರಚಿಸುವದು, ಸಾಮಾನ್ಯ ಸದಸ್ಯನ ಸಮ್ಮೋಹಗೊಳಿಸುವದಷ್ಟೇ ಅವಶ್ಯಕವಾಗಿ , ಸಮಾಜ ಮುಖಿ ಕಾರ್ಯ ತತ್ಪರತೆಗಳಿಗೆ ಜಾಡ್ಯ ಹಿಡಿಯುತ್ತದೆ. ಅದರಲ್ಲೂ ನಮ್ಮ ಶ್ರೀ ಅಖಿಲ ಹವ್ಯಕ ಮಹಸಭೆಯಂತಹ ಸಂಸ್ತೆಯಲ್ಲಿ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ವೆಚ್ಚ ಮಾಡಿದ್ದರ ವರದಿ ಪ್ರತಿ ತಿಂಗಳ ಪತ್ರಿಕೆಯಲ್ಲಿ ನೀಡುವ ವ್ಯವಸ್ಥೆ ಜಾರಿಗೊಳ್ಳುವಂತೆ ಸಾಮಾನ್ಯ ಸದಸ್ಯರೆಲ್ಲ ಒತ್ತಡ ತರಬೇಕಾಗಿರುವದು ಪ್ರಥಮ ಅವಶ್ಯಕತೆ. ಪತ್ರಿಕೆಯ ಒಂದು ಪುಟ ಪ್ರತಿ ತಿಂಗಳು , ತಿಂಗಳ ಆಯ ವ್ಯಯದ ವರದಿಗೆ ಮೀಸಲಿಟ್ಟರೆ , ಸಮಾಜ ಬಾಂಧವರಲ್ಲಿ ಮಹಾಸಭೆಯ ಬಗೆಗೆ ಹೆಚ್ಚಿನ ಅಭಿಮಾನ ಉಂಟಾಗಿ ಹತ್ತಾರು ಪ್ರಯೋಜನಕಾರೀ ಕಾರ್ಯಗಳಿಗೆ ಧನ ಸಂಗ್ರಹಣೆಗೂ ಅನುಕೂಲ. 


ಹರಿಹರ . ಎಸ್ . ಭಟ್ , ಬೆಂಗಳೂರು . 
ಶ್ರೀ ಅಖಿಲ ಹವ್ಯಕ ಮಹಾಸಭಾ , ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

November 23 , 2013.

ಈ ವಿಚಾರಗಳನ್ನು ಪ್ರತಿಯೊಬ್ಬ ಹವ್ಯಕ ರಿಗೂ ತಲುಪಿಸುವ ವ್ಯವಸ್ಥೆಗೆ ನೀವು ಸಹಾಯ ಮಾಡಿ. ನಿಮ್ಮ ಮತ್ತು ನಿಮ್ಮ ಮಿತ್ರರ, ಸಂಬಂಧಿಗಳ e-mail id ಯನ್ನು havyakavaarte@gmail.com ಎಂಬ id ಗೆ e-mail ಮಾಡಿ . ನಮ್ಮ ಸಂಪರ್ಕದಲ್ಲಿರಿ. 

ಈ ರೀತಿ e-mail ವ್ಯವಸ್ಥೆಗೆ ಬರಲಾರದವರಿಗೆ ಮಾತುಗಳ ಮೂಲಕ ಈ ಎಲ್ಲ ವಿಚಾರಗಳನ್ನು ತಿಳಿಸಿ ಅವರ ಜೊತೆ ಚರ್ಚಿಸಿ. ಹವ್ಯಕ ಸಮಾಜದಲ್ಲೊಂದು ಸಂಚಲನೆ ಮೂಡಿ ಬರಲಿ. 

Please visit:www.havyakarindahavyakarigagi.blogspot.com

No comments:

Post a Comment