Saturday, October 12, 2013

Election : Director of Shree Akhila Havyaka Mahasabha ( R ) Bangalore on 23 rd October 2013.

Bring a Change ;  It is in your hands now.

Photo: Your  VOTE  will make a difference,  

VOTE FOR        HARIHAR S BHAT

1)        Please vote if you are a member and tell your  friends to vote

2)        If you are not a member, please call and find out your friends,                relatives who are members and request them to vote

Election   ON

Sunday       20th October 13, 2013      


Shree Akhila Havyaka Mahasabha (R) Bangalore

Call :    99450 04681

More details:   www.havyakarindahavyakarigaagi.blogspot.com
Harihar    S    Bhat





Photo: ~Kara
Harihar      S        Bhat








ಮಿತ್ರರೇ, 


ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಚುನಾವಣೆ ನಿರ್ಧಾರವಾಗಿದೆ. ದಿನಾಂಕ ೨೦-೧೦-೨೦೧೩ , ಭಾನುವಾರದಂದು . ಸ್ಥಳ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದ ಸಭಾಂಗಣ , ೪ ನೇ ಮುಖ್ಯ ರಸ್ತೆ, ೧೩ ನೇ ಅಡ್ಡ ರಸ್ತೆ , ಮಲ್ಲೇಶ್ವರ , ಬೆಂಗಳೂರು. ಬೆಳಿಗ್ಗೆ ೧೦ ಗಂಟೆಗೆ. 

ಮತ ಚಲಾಯಿಸಲು ತಾವು ಕಡ್ಡಾಯವಾಗಿ ನಿಮ್ಮ ಹೆಸರಿನಲ್ಲಿ ಬಂದ ಕಳೆದ ಆರು ತಿಂಗಳುಗಳೊಳಗಿನ ಹವ್ಯಕ ಮಾಸ ಪತ್ರಿಕೆಯೊಂದನ್ನು ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆ, ( ಸರಕಾರದ ಮತದಾರರ ಗುರುತಿನ ಚೀಟಿ, ಅಧಾರ ಕಾರ್ಡ್ , ರೇಶನ್ ಕಾರ್ಡ್ , ಪಾನ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್ , ಇತ್ಯಾದಿ ಯಾವುದಾದರೊಂದನ್ನು ) ತರಬೇಕು . ( ಝೆರೊಕ್ಷ ಕಾಪಿಯೊಂದನ್ನೂ ತನ್ನಿ ).

ತಮಗೆಲ್ಲ ತಿಳಿದಿರುವಂತೆ ನಾನು ಒಬ್ಬ ಅಭ್ಯರ್ಥಿ. ತಾವೆಲ್ಲ ನನಗೆ ಒಂದು ಮತ ನೀಡಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ತಾವು ಮತ ನೀಡಿ ನನಗೆ ನಿರ್ದೇಶಕ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನನ್ನ ಮುಂದಿರುವ ಕನಸುಗಳು / ಯೋಜನೆಗಳು ಇಂತಿವೆ :

೧. ಎಲ್ಲ ನಿರ್ದೇಶಕರ ಸಹಕಾರ ಕೋರಿ ನಾನು ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೆ ನಮ್ಮ ಹವ್ಯಕರಿರುವ ಎಲ್ಲ ಪ್ರದೇಶದ ನಿರ್ದೇಶಕರಿಗೂ ಬೇರೆ ಬೇರೆ ಸೂಕ್ತ ಹುದ್ದೆಗಳನ್ನು ನೀಡಿ ಎಲ್ಲರ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತೇನೆ. ಮತ್ತು

೨. ಹಾಲಿ ಅಧ್ಯಕ್ಷರು ಕೈಗೆತ್ತಿಕೊಂಡಿರುವ ಕಟ್ಟಡದ ಕಾರ್ಯವನ್ನು ಎಲ್ಲ ಸದಸ್ಯರು, ನಿರ್ದೇಶಕರು, ಸಮಾಜದ ಗಣ್ಯ ವ್ಯಕ್ತಿಗಳು ... ಮುಂತಾದವರ ಸಹಕಾರದೊಂದಿಗೆ ಪೂರ್ಣಗೊಳಿಸುತ್ತೇನೆ.

೩. ಮಹಾಸಭೆಯ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಂಪೂರ್ಣ ಪಾರದರ್ಶಕತೆ ಕಾಯ್ದು ಕೊಳ್ಳುತ್ತೇನೆ. ಗೌರವಾನ್ವಿತ ಯಾವುದೇ ಸದಸ್ಯರು ಯಾವುದೇ ಮಾಹಿತಿ ಪಡೆಯಬಯಸಿದಲ್ಲಿ ಸೂಕ್ತ ಸಮಯದಲ್ಲಿ ದೊರೆಯುವ ವ್ಯವಸ್ಥೆ , ಎಲ್ಲ ನಿರ್ದೇಶಕರ ಸಹಕಾರದೊಂದಿಗೆ , ಏರ್ಪಾಡು ಮಾಡುತ್ತೇನೆ.

೪. ಬೆಂಗಳೂರಿನಿಂದ ಹೊರಗೆ ವಾಸ್ತವ್ಯವಿರುವ ನಿರ್ದೇಶಕರು ಎಲ್ಲ ಕಾರ್ಯ ಕಲಾಪಗಳಲ್ಲಿ ಹಾಜರಿರಲು ಅವರ ವಾಸ್ತವ್ಯದ ಸಮೀಪದ ರೈಲು ನಿಲ್ದಾಣದಿಂದ ಮಹಾಸಭೆಗೆ ಬರಲು ಟಿಕೆಟ್ ವ್ಯವಸ್ಥೆಯನ್ನು , ನಿರ್ದೇಶಕರೆಲ್ಲರ ಸಹಕಾರ , ಸಮ್ಮತಿಯೊಡನೆ ಏರ್ಪಾಡುಮಾಡಬಯಸುತ್ತೇನೆ.

೫. ಮಹಾಸಭೆಯ ಅಭಿವೃದ್ಧಿಗೆ ಕೈ ಜೋಡಿಸಬಯಸುವ ಪ್ರತಿಯೊಬ್ಬ ಸದಸ್ಯರಿಗೂ ಮುಕ್ತ ಅವಕಾಶ ಕಲ್ಪಿಸಲು ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ವ್ಯವಸ್ಥೆ ಮಾಡುತ್ತೇನೆ.

೬. ಮಹಾಸಭೆಯ ಎಲ್ಲ ಕಾರ್ಯಕ್ರಮಗಳ - ಹಣಕಾಸಿಗೆ ಸೂಕ್ತ ಜಾಹೀರಾತು, ದೇಣಿಗೆ ಪಡೆದು ಮಹಾಸಭೆಯ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆಯಾಗದಂತೆ ವ್ಯವಸ್ಥೆ ಗೊಳಿಸುವತ್ತ ನಿರ್ದೇಶಕರೆಲ್ಲ ಸಲಹೆ ಸೂಚನೆ ಪಡೆದು ಕಾರ್ಯಪೃವೃತ್ತನಾಗುತ್ತೇನೆ.

೭. ನಮ್ಮ ಹವ್ಯಕ ಸಮಾಜದ ಸದಸ್ಯರೆಲ್ಲ ವಿವಿಧ ಉದ್ಯೋಗಗಳಲ್ಲಿ ವಿವಿಧ ಪ್ರದೇಶಗಳಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಹವ್ಯಕರೆಲ್ಲರ ಗಣತಿ ಕಾರ್ಯ ಕೈಗೊಂಡು , ಅವರವರ ಉದ್ಯೋಗಾನುಸಾರ ಮಾಹಿತಿ ಕ್ರೋಢಿಕರಿಸಲು ಆನ್ಲೈನ್ ( online ) ವ್ಯವಸ್ಥೆ ಮಾಡುವತ್ತ ನಿರ್ದೇಶಕರ ಸಹಾಯ, ಸಹಕಾರ ಪಡೆಯುತ್ತೇನೆ.

೮. ಒಂದು ೪೦ x ೬೦ ಸೈಟ್ ಬೆಂಗಳೂರಿನಲ್ಲಿ ಮಹಾಸಭೆಯ ಹೆಸರಿನಲ್ಲಿ ದಾನ ಪಡೆದು / ಸರಕಾರದಿಂದ ಪಡೆದು / ಖರೀದಿಸಿ ಆರ್ಥಿಕವಾಗಿ ಬಲಾಢ್ಯರಾಗಿರುವ ದೊಡ್ಡ ದೊಡ್ಡ ಖಾಸಗಿ ಕ್ಷೇತ್ರದ ಕಂಪನಿಗಳನ್ನು / ಸರಕಾರೀ , ಅರೆ ಸರಕಾರೀ ಕ್ಷೇತ್ರದ ಗಣ್ಯರನ್ನು / ನಮ್ಮ ಸಮಾಜದ ಅರ್ಥಿಕ ಬಲಾಡ್ಯರನ್ನು , ಎಲ್ಲ ನಿರ್ದೇಶಕರ ಸಹಾಯ , ಸಹಕಾರದೊಂದಿಗೆ ಕಾಡಿ, ಬೇಡಿ ಅವರ ಪ್ರಾಯೋಜಕತ್ವದಿಂದ ಒಳ್ಳೆಯ ಆದಾಯ ತರುವ ಒಂದು ಉತ್ತಮ ಸಭಾಭವನ, ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದಿರುವ ವಿಧ್ಯಾರ್ಥಿಗಳಿಗಾಗಿ ಒಂದು ನೂರು ಮಕ್ಕಳು ಇರಬಲ್ಲ ಉಚಿತ ವಿಧ್ಯಾರ್ಥಿಭವನ ( free hostel ) , ಹಳ್ಳಿಗಳಿಂದ ಬರುವ ಹವ್ಯಕರಿಗೆ ನಾಲ್ಕು ದಿನ ಉಚಿತವಾಗಿ ತಂಗಲು ಒಂದು ನೂರು ರೂಂ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವದು.

ಮಿತ್ರರೇ, ಈ ಎಲ್ಲ ಕನಸುಗಳು ನನಸಾಗಲು ತಮ್ಮ ಪ್ರಯತ್ನ ಬಹು ಮುಖ್ಯವಾದುದು. ಆದ್ದರಿಂದ ನಾನು ನಿರ್ದೇಶಕನಾಗಿ ಆಯ್ಕೆಯಾಗಲು ನಿಮಗೆ ಪರಿಚಯವಿರುವ , ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಸದಸ್ಯತ್ವವಿರುವ ಎಲ್ಲರನ್ನು ಸಂಪರ್ಕಿಸಿ , ಅವರೆಲ್ಲ ನನಗೆ ವೋಟು ಮಾಡುವಂತೆ ಪ್ರಯತ್ನ ಮಾಡಬೇಕಾಗಿ ಸವಿನಯ ವಿನಂತಿ.



Harihar S Bhat , Bangalore.
October 11, 2013.




I request you and your friends to motivate the members of Shree Akhila Havyaka Mahasabha to come on Sunday 20 th October and vote for me. I assure the best and sincere service to havyaka fraternity.



We need a voice in decision making and implementing the ideas.



Total Transparency is needed in the activities of Mahasabha and I assure havyaka fraternity to maintain the transparency. If the total transparency is introduced the unwanted elements with the motive of personal gains / interests within the administration would be weeded out on its own and the organisation would prosper.



It has an existence of 62 years , compare the growth of any organisation in this land of this long tenure. We would be ashamed of the growth.



Sir / Madam ........ these dreams could be achieved with hard work of the persons like you and me and all the members of this havyaka community by team work. We have a large number of well-wishers and the supports and net work of the people like you .




Photo: Your  VOTE  will make a difference,  

VOTE FOR        HARIHAR S BHAT

1)        Please vote if you are a member and tell your  friends to vote

2)        If you are not a member, please call and find out your friends,                relatives who are members and request them to vote

Election   ON

Sunday       20th October 13, 2013      


Shree Akhila Havyaka Mahasabha (R) Bangalore

Call :    99450 04681

More details:   www.havyakarindahavyakarigaagi.blogspot.com
Harihar      S        Bhat



Bring change, It is in your hands now.

Photo: ~Kara
Harihar   S   Bhat

Friday, October 11, 2013

ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆ

ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆ



ನೋಡಿ ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸದಸ್ಯರ ಸಂಖ್ಯೆ ಈಗ ಹತ್ತ ಹತ್ತರ ಹದಿನಾರು ಸಾವಿರ ಆಗ್ತಾ ಇದ್ದು. ಸಂತೋಷದ ವಿಷಯ . ಈ ಸಂಸ್ಥೆಯ ಆಡಳಿತಾನೂಕೂಲಕ್ಕಾಗಿ ಒಂದು ಆಡಳಿತ ಮಂಡಳಿ ಇದ್ದು. ನಿಮಗೆಲ್ಲ ತಿಳಿದಿರುವ ವಿಚಾರ. ಈ ಆಡಳಿತ ಮಂಡಳಿಗೆ ಆಯ್ಕೆಯಾದ ಸದಸ್ಯರ ಅವಧಿ ನಾಲ್ಕು ವರ್ಷಗಳು. ಪ್ರತಿ ಎರಡು ವರ್ಷಕ್ಕೆ ಅರ್ಧದಸ್ಟು ಸದಸ್ಯರು ನಿವ್ರತ್ತರಾಗಿ , ಆ ಸ್ಥಾನಗಳಿಗೆ ಚುನಾವಣಾ ಅಥವಾ ಸರ್ವ ಸಂಮತಿಯಿಂದ ಆಯ್ಕೆ ನಡೆಯಬೇಕು. ಇದು ನಿಯಮ.


ಈಗೇನಾಗುತ್ತಿದೆ ನೋಡೋಣ. ಮಹಾಸಭೆಯ ವಾರ್ಷಿಕಾಧಿವೇಶನ ನಡೆದಾಗ ಅರವತ್ತರಿಂದ ತೊಮಭತ್ತು , ಹೆಚ್ಚೆಂದರೆ ಒಂದು ನೂರಾ ಇಪ್ಪತ್ತು ಸದಸ್ಯರು ಹಾಜರಾಗಿ , ಈ ಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಅಂದರೆ ಹದಿನೈದರಿಂದ ಹದಿನಾರು ಸಾವಿರ ಜನರ ಪ್ರತಿನಿಧಿಗಳನ್ನು ಅರವತ್ತು ಎಂಭತ್ತು ಜನ ಆರಿಸುತ್ತಾರೆ. ಇನ್ನೂ ಗುಟ್ಟಿನ ವಿಷಯವೆಂದರೆ ಕೇವಲ ಎಂಟೋ ಹತ್ತೋ ಜನರು ಆಯ್ಕೆಯನ್ನು ನಿರ್ಧರಿಸುತ್ತಾರೆ. ಆಸಕ್ತಿಯುಳ್ಳವರು ಹತ್ತು ವರುಷಗಳ ವಾರ್ಷಿಕಾಧಿವೇಶನದ ವರದಿ ಪಡೆದು ಪರೀಕ್ಷಿಸಬಹುದು.


ಇದು ಸಮಂಜಸವೇ ? ಹಾಗಿದ್ದರೆ ಏನು ಮಾಡಬೇಕು ? ನಮ್ಮ ಹವ್ಯಕರು ಬೆಂಗಳೂರಿನಲ್ಲಿ ಅಲ್ಲದೆ ವಿವಿಧ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಎಲ್ಲ ಕಡೆ ವಾಸಿಸುವ ಸದಸ್ಯರಿಗೂ ಸಮಾನವಾದ ಅವಕಾಶಗಳಿರಬೇಕು. ಪ್ರಜಾಪ್ರಭುತ್ವ ರೀತಿ , ಆಯ್ಕೆಯಾಗಬೇಕು. ಎರಡು ವರ್ಷಗಳಿಗೊಮ್ಮೆ ಬರುವ ಈ ಆಯ್ಕೆಗೆ , postal ballot ಅಂದರೆ ಸದಸ್ಯರು ಯಾರು ಸಭೆಗೆ ಬರಲಾಗುವದಿಲ್ಲವೋ ಅವರು ಮನೆಯಿಂದಲೇ ತಮ್ಮ ನಿರ್ಧಾರವನ್ನು ballot paper ಮುಖಾಂತರ ತಿಳಿಸುವ ಅವಕಾಶವನ್ನು ಒದಗಿಸಬೇಕು. ಇದಕ್ಕೆ ಬೇಕಾಗುವ ಹಣಕಾಸು ಖರ್ಚು ಎಸ್ಟಾದರೂ ಸಮಾಜದ ಸಾರ್ವಜನಿಕ ಸಂಸ್ಥೆಗೆ ಇದು ಅತಿ ಅವಶ್ಯಕ. ಅಲ್ಲದೆ ಒಂದು ವರ್ಷ ವ್ಯಾವಹಾರಿಕ ಖರ್ಚು ( administration expenses ) ಎಂದು 32 . 58 ಲಕ್ಷ ( Rs. 32,58,135 /= please refer page 16 of Havyak masa patrike of september,2012 Receipts and Payments account ) ಇರುವ ಸಾರ್ವಜನಿಕ ಸಂಸ್ತೆಗೆ , ಸರ್ವ ಸದಸ್ಯರ ಪ್ರತಿನಿಧಿತ್ವ ಇರಲು ಈ ರೀತಿಯ ಆಯ್ಕೆ ಸಮಂಜಸವಲ್ಲವೇ ? ಅತಿ ಅವಶ್ಯಕವಲ್ಲವೇ ?



ವಾಸ್ತವಿಕತೆ ಎಂದರೆ ಹದಿನೈದರಿಂದ ಈಪ್ಪತ್ತು ಅಬ್ಬಬ್ಬ ಎಂದರೆ ಮೂವತ್ತು ಸದಸ್ಯರು ಈಗ ಹದಿನೈದರಿಂದ ಇಪ್ಪತ್ತು ವರ್ಷಗಳಲ್ಲಿ ಕಾರ್ಯ ಕೈಗೊಂಡು ತಮ್ಮಿಂದಾದ ಇಷ್ಟ ಪ್ರಯತ್ನಗಳಿಂದ ಸಂಸ್ತೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಹಜವಾಗಿ ಮತ್ತು ನೈಸರ್ಗಿಕವಾಗಿ ಅಲ್ಲೊಂದು ಸ್ವಹಿತ ಒಡ ಮೂಡಿರುತ್ತದೆ. ಮನುಷ್ಯ ಗುಣ ಸಹಜವಾಗಿ ಆ ಸ್ವಹಿತ ರಕ್ಷಣೆಯತ್ತ ಗಮನವಿರುತ್ತದೆ. ಹಾಗಾಗಿ ಹೊಸ ಸದಸ್ಯರಿಗೆ , ಯುವ ಸದಸ್ಯರಿಗೆ ಅವಕಾಶಗಳು ಅಲಬ್ಯವಾಗಿರುತ್ತವೆ. ಹಳೆಯ ವಿಚಾರಗಳಿಂದ ಹೊರಬರಲಾರದವರ ನೆರಳಿನಲ್ಲೇ, ಅವಕಾಶಕ್ಕಾಗಿ ಸ್ತುತಿಯಿಂದ ಸೇವಿಸುವವರಿಗಸ್ಟೇ ಅಲ್ಲಲ್ಲಿ ಅವಕಾಶ ಒದಗಿ ಬರುತ್ತದೆ. ಹೊಸ ವಿಚಾರಗಳು ಇಂದಿನ ದಿನಗಳಿಗೆ ಪ್ರಸ್ತುತ ವಾದದ್ದು ಯುವಕರಿಂದ ಅಥವಾ ಯುವ ವಿಚಾರಗಳಿಂದ ಬಂದ ಸಲಹೆಗಳಿಗೆ ಅರ್ಧದಲ್ಲೇ ಮೋಕ್ಷ ಪ್ರಾಪ್ತಿ.



ನನ್ನ ಅನುಭವದಂತೆ ನಮ್ಮ ಸಮಾಜದಲ್ಲಿ ಸಾವಿರಾರು ವಕೀಲರು , advocates , chartered accountants, industrialists, engineers, doctors, landlords, farmers etc ಇದ್ದ . millionaires ( ದಶ ಲಕ್ಶಾಧೀಶ್ವರರು ) ಸಾಮಾನ್ಯ ಎಲ್ಲೆಡೆ ಇದ್ದ. Billionaires ( 100 ಕೋಟಿ ರುಪಾಯಿಯ ಅಧೀಶ್ವರರು ) ಇದ್ದೇ ಇದ್ದ. ಸಂಶಯ ಬೇಡ. ಈ ರೀತಿಯ ಘನ ಹಿನ್ನೆಲೆಯುಳ್ಳ ಸಮಾಜಕ್ಕೆ ಸಮಂಜಸ ಪ್ರಾತಿನಿದ್ಯವುಳ್ಳ, ಪ್ರಜಾಪ್ರಭುತ್ವ ರೀತಿ ಆಯ್ಕೆಗೊಳ್ಳುವ ವ್ಯವಸ್ತೆ ಬೇಡವೇ ? ಇದು ಇಂದಿನ ಅವಶ್ಯಕತೆ ಯಲ್ಲವೇ ?



ಬದಲಾವಣೆ ಜಗದ ನಿಯಮ. ಬದಲಾವಣೆ ಬರಲೇ ಬೇಕು. ಎಲ್ಲರೂ ಸೇರಿ ಕೈ ಜೋಡಿಸಿದಾಗ ಒಳ್ಳೆಯ ಬದಲಾವಣೆಗಳು ಬರುತ್ತವೆ. ಇದೂ ಜಗದ ನಿಯಮವೇ .


ಹಾಗಿದ್ದರೆ ಈಗ ನೀವೇನು ಮಾಡಬೇಕು ? ಇಲ್ಲಿ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ವಿವರವಾಗಿ ಬರೆಯಿರಿ. ನಿಮ್ಮೆಲ್ಲ ಅಭಿಪ್ರಾಯಗಳನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಿಗೆ ತಲುಪಿಸುವ ವ್ಯವಸ್ತೆ ಇದೆ.


ಹರಿಹರ ಭಟ್, ಬೆಂಗಳೂರು.
October 31 , 2012.

ಹವ್ಯಕ ವಿವಾಹ ------ ಒಂದು ಉಚಿತ ಸಾಮಾಜಿಕ ಸೇವೆ .

ಹವ್ಯಕ ವಿವಾಹ ------ ಒಂದು ಉಚಿತ ಸಾಮಾಜಿಕ ಸೇವೆ .




havyakavivaaha@gmail.com ಈ ವಿಳಾಸಕ್ಕೆ ಮದುವೆಯಾಗಬಯಸುವ ಹವ್ಯಕ ಗಂಡು, ಹೆಣ್ಣಿನ ವಿವರ ಕಳಿಸಿ. ವಿವಾಹ ಅಪೇಕ್ಷಿತ ಗಂಡಿನ ವಿವರವನ್ನು ಸೂಕ್ತ ಹೆಣ್ಣಿನವರಿಗೂ, ವಿವಾಹ ಅಪೇಕ್ಷಿತ ಹೆಣ್ಣಿನ ವಿವರವನ್ನು ಸೂಕ್ತ ಗಂಡಿನವರಿಗೂ ಕಳಿಸಿಕೊಡಲಾಗುವದು. ಮುಂದಿನ ನಡೆಗಳಿಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸೂಕ್ತ ನಿರ್ಧಾರಕ್ಕೆ ಬರಬಹುದು. 


ನಿಮ್ಮ e-mail ವಿಳಾಸ, ಗಂಡಿನ / ಹೆಣ್ಣಿನ ಬಗೆಗೆ ಎಲ್ಲಾ ವಿವರ, ನಿಮ್ಮ ಆಲೋಚನೆಗಳು - ನಿರೀಕ್ಷೆಗಳು ಇತ್ಯಾದಿ ಸೂಕ್ತ, ಅವಶ್ಯಕ ವಿವರಗಳನ್ನು ಕಳಿಸಿ.


ನಿಮ್ಮ ಪರಿಚಯದವರಿಗೂ ಈ ಮಾಹಿತಿ ತಲುಪಿಸಿ. ಅವರು ಹಳ್ಳಿಯವರಾಗಿದ್ದು , e-mail ಸೌಲಭ್ಯವಿಲ್ಲದವರಾಗಿದ್ದರೆ , ನಿಮ್ಮನ್ನು ಕೋರಿದರೆ ಅವರ ಪರವಾಗಿ ನೀವು ಅವರ ಮಾಹಿತಿ ನೀಡಬಹುದು.


ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಯಾರಿಗೂ ಒಂದು ರೂಪಾಯಿಯನ್ನು ನೀಡಬೇಕಾಗಿಲ್ಲ. 

IAS , IPS ,IFS , IES , AIEEE , JEE , CET , MBBS ಪರೀಕ್ಷೆಗಳಿಗೆ ತಯಾರು ಮಾಡುವ ಯೋಜನೆ


 IAS , IPS ,IFS , IES , AIEEE , JEE , CET , MBBS ಪರೀಕ್ಷೆಗಳಿಗೆ ತಯಾರು ಮಾಡುವ ಯೋಜನೆ



ನಿಮ್ಮ ಪರಿಚಿತರಲ್ಲಿ ಈ ರೀತಿ ಮಕ್ಕಳಿದ್ದರೆ, ನಮಗೆ ಪರಿಚಯಿಸಿ. ಅವರನ್ನು ಇಂದಿನ ಸಮಾಜಕ್ಕೆ ತೆರೆದುಕೊಳ್ಳಲು ಮತ್ತು ಮುಂದೆ ಅವರು ಸಮಾಜಕ್ಕೆ ಆಸ್ತಿಯಾಗಿ, ಉಪಯೋಗಿ ಸಾಮಾಜಿಕ ಜೀವಿಯಾಗುವಂತೆ ಪ್ರೋತ್ಸಾಹಿಸಲು ಅವರನ್ನು IAS , IPS ,IFS , IES , AIEEE , JEE , CET , MBBS ಪರೀಕ್ಷೆಗಳಿಗೆ ತಯಾರು ಮಾಡುವ ಯೋಜನೆಗೆ ಸಹಕರಿಸಿ:

೧. ಹವ್ಯಕ ಮಕ್ಕಳಿರಬೇಕು.

೨. ಹತ್ತರಿಂದ ಹದಿನೈದು ವಯಸ್ಸಿನೊಳಗಿರಬೇಕು.

೩. ಹಳ್ಳಿಯಲ್ಲಿ ಹುಟ್ಟಿ, ಬೆಳೆಯುತ್ತಿರುವವರಿಗೆ ಮೊದಲ ಆದ್ಯತೆ.

೪. ನಗರ ಪ್ರದೇಶದವರಿಗೂ ಸೌಲಭ್ಯವಿದೆ.

೫. ಕಡು ಬಡವರಿಗೆ ಮೊದಲ ಆದ್ಯತೆ.

ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯ. ಬಟ್ಟೆ, ವಸತಿ, ಶಾಲಾ - ಕಾಲೇಜ್ ಫೀಸ್ , ಟ್ಯುಶನ್ ಫೀಸ್ ಎಲ್ಲ ಭರಿಸಲಾಗುವದು. ಮಕ್ಕಳು ಅರ್ಹತಾ ಪರೀಕ್ಷೆ ಬರೆಯಬೇಕು. ಆಯ್ಕೆಯಾದ ಮಕ್ಕಳು ತಮ್ಮ ಓದಿನ ಸಾಮರ್ಥ್ಯವನ್ನು ಆಯ್ಕೆ ಮಾಡಿಕೊಂಡ ಕೋರ್ಸ್ ಗೆ ಸಂಪೂರ್ಣ ತೊಡಗಿಸಿಕೊಳ್ಳಬೇಕು.

ತಮ್ಮ ವಿವರ ಕಳುಹಿಸಿ: hariharbhat @gmail .com

****************

ಮಗುವಿನ ಎಲ್ಲಾ ಶೈಕ್ಷಣಿಕ ವೆಚ್ಚವನ್ನು ಭರಿಸಲು ದಾನಿಗಳು ಮುಂದೆ ಬರಲು ಕೋರಿದೆ. ಒಂದು ಮಗುವಿಗೆ ಪ್ರತಿವರ್ಷ ರೂಪಾಯಿ ಒಂದು ಲಕ್ಷದಂತೆ ಆರರಿಂದ ಎಂಟು ವರ್ಷಗಳ ವರೆಗೆ ಸತತವಾಗಿ ಒಂದು ಮಗುವನ್ನು ದತ್ತು ಪಡೆದಂತೆ ಅದರ ಸಂಪೂರ್ಣ ವೆಚ್ಚ ಭರಿಸುವ ಆರ್ಥಿಕ ತಾಕತ್ತುಳ್ಳ, ಸಮಾಜ ಸೇವಾ ಮನಸ್ಸುಳ್ಳ ದಾನಿಗಳಿಂದ ಸಹಾಯ ಕೋರಿದೆ. ಪ್ರತಿಯೊಂದು ರೂಪಾಯಿ ವೆಚ್ಚದಲ್ಲೂ ದಾನಿಗಳಿಗೆ ವಿವರ ನೀಡಲಾಗುವದು ಮತ್ತು ಪ್ರತಿ ನಿರ್ಣಯಗಳಲ್ಲಿ ದಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ದಾನಿಗಳಿಗೆ ಎಲ್ಲಾ ವಿವರ ನೀಡಲಾಗುವದು . ಪ್ರತಿಯೊಂದು ನಿರ್ಣಯ ಪ್ರಕ್ರಿಯೆಯಲ್ಲೂ ದಾನಿಗಳನ್ನು ತೊಡಗಿಸಿಕೊಳ್ಳಲಾಗುವದು.

ದಾನಿಗಳು ಸಂಪರ್ಕಿಸಿ: hariharbhat @gmail .com

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು : ೨೦೧೨ - ೧೩ ನೇ ವಾರ್ಷಿಕ ಸಭೆ ಕುರಿತು.

ಮಿತ್ರರೇ ,

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು : ೨೦೧೨ - ೧೩ ನೇ ವಾರ್ಷಿಕ ಸಭೆ ಕುರಿತು.


ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು : - ೨೦೧೨ - ೧೩ ರ ಸರ್ವಸದಸ್ಯರ ೭೧ ನೇ ವಾರ್ಷಿಕ ಸಭೆಯನ್ನು ದಿನಾಂಕ ೨೦-೧೦-೨೦೧೩ , ಭಾನುವಾರದಂದು ಕರೆಯಲಾಗಿದೆ. ಸ್ಥಳ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದ ಸಭಾಂಗಣ , ೪ ನೇ ಮುಖ್ಯ ರಸ್ತೆ, ೧೩ ನೇ ಅಡ್ಡ ರಸ್ತೆ , ಮಲ್ಲೇಶ್ವರ , ಬೆಂಗಳೂರು. ಬೆಳಿಗ್ಗೆ ೧೦ ಗಂಟೆಗೆ. 

ನಾನು ಈ ವರ್ಷದ ನಿರ್ದೇಶಕ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೇನೆ. ತಾವು ನನ್ನ ಪರವಾಗಿ ಮತ ನೀಡಿ ಆರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಚುನಾವಣೆ ಅವಶ್ಯಕವಾಗಿ , ನಡೆದರೆ ಆಗ ಮತ ಚಲಾಯಿಸಲು ತಾವು ಕಡ್ಡಾಯವಾಗಿ ನಿಮ್ಮ ಹೆಸರಿನಲ್ಲಿ ಬಂದ ಕಳೆದ ಆರು ತಿಂಗಳುಗಳೊಳಗಿನ ಹವ್ಯಕ ಮಾಸ ಪತ್ರಿಕೆಯೊಂದನ್ನು ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆ , ( ಸರಕಾರದ ಮತದಾರರ ಗುರುತಿನ ಚೀಟಿ, ಅಧಾರ ಕಾರ್ಡ್ , ರೇಶನ್ ಕಾರ್ಡ್ , ಪಾನ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್ , ಇತ್ಯಾದಿ ಯಾವುದಾದರೊಂದನ್ನು ) ತರಬೇಕು . ( ಝೆರೊಕ್ಷ ಕಾಪಿಯೊಂದನ್ನೂ ತನ್ನಿ ). 

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು ಇದರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಸಾಗಿದೆ. ೨೦೧೦ - ೧೧ ನೆ ಸಾಲಿನ ವಾರ್ಷಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರು ೧೩೬ ಮತ್ತು ೨೦೧೧ - ೧೨ ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಹಾಜರಿದ್ದವರು ೯೨ ಸದಸ್ಯರು ಎಂಬುದನ್ನು ಹವ್ಯಕ ಮಾಸ ಪತಿಕೆಯಲ್ಲಿ ಪ್ರಕಟಗೊಂಡ ಅಂಕಿ ಅಂಶಗಳು ದೃಡಪಡಿಸುತ್ತವೆ. ನಾಲ್ಕಾರು ಕಡೆ ದೊರಕಿದ ಅಂದಾಜಿನಂತೆ ನಮ್ಮ ಹವ್ಯಕ ಸಮಾಜದ ಜನಸಂಖ್ಯೆ ನಾಲ್ಕರಿಂದ ಆರು ಲಕ್ಷಗಳು. ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು ಇದರ ಸದಸ್ಯತ್ವ ಪಡೆದವರು ೧೬,೧೭೮ ಮಾತ್ರ. ಈ ಸಂಖ್ಯೆಯನ್ನು ಹವ್ಯಕ ಪತ್ರಿಕೆಯಲ್ಲಿ ಮುದ್ರಿಸಿದ ವರದಿ ಹೇಳುತ್ತದೆ. ಈ ರೀತಿಯ ಬೆಳವಣಿಗೆಗಳು ಹೀಗೇ ಮುಂದುವರಿದರೆ ಮುಂದಿನ ಎಂಟು ಹತ್ತು ವರ್ಷಗಳಲ್ಲಿ ವಾರ್ಷಿಕ ಸಭೆಗೆ ಹಾಜರಿರುವವರು ಕೇವಲ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಇವರಿಂದ ಉಪಕೃತರಾದವರು ಮಾತ್ರ ಆದೀತು ಎನ್ನುವದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಆದಕಾರಣ ತಮ್ಮೆಲ್ಲರನ್ನೂ ಒತ್ತಾಯಪೂರ್ವಕವಾಗಿ ಆಗ್ರಹಿಸುವದೇನೆಂದರೆ ತಾವೆಲ್ಲ ವಾರ್ಷಿಕ ಸಭೆಗೆ ಬಿಡುವು ಮಾಡಿಕೊಂಡು ಬನ್ನಿ ಅಲ್ಲದೆ ಎಲ್ಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ . 

ಮಿತ್ರರೇ ಈ ವಿಷಯಗಳನ್ನು ಗಮನಿಸಿ . ಸರ್ವಸದಸ್ಯರ ವಾರ್ಷಿಕ ಸಭೆಗೆ ಶ್ರೀ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರೇ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಅವರು ತಮ್ಮ ವಿವೇಚನೆಗೊಳಪಟ್ಟು ಯಾವ ಯಾವ ವಿಷಯಗಳು ಚರ್ಚಿಸಲು ಯೋಗ್ಯ ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಅಂದರೆ ಯಾರು , ಯಾವ ಪದಾಧಿಕಾರಿಗಳು ಒಂದು ವರುಷ ಯಾವ ಯಾವ ಕೆಲಸಗಳನ್ನು ಮಾಡಿದ್ದಾರೋ ಆ ಕೆಲಸಗಳ ವಿಮರ್ಶೆ ಯಾವ ರೀತಿ ಆಗಬೇಕು, ಯಾವುದು ವಿಮರ್ಶೆಗೊಳಗಾಗಬಾರದು ಎಂಬುದನ್ನು ಅವರೇ ( ಅದ್ಯಕ್ಷರು ಮತ್ತು ಪದಾಧಿಕಾರಿಗಳು ) ನಿರ್ಧರಿಸುವವರು. ಇಲ್ಲಿ ಸಾಮಾನ್ಯ ಸದಸ್ಯನು ಯಾವುದೇ ರೀತಿ ಭಾಗಿಯಾಗುವಂತಿಲ್ಲ. ದಿನ ನಿತ್ಯ ಚಟುವಟಿಕೆ ಕೈಗೊಂಡವರು ಹೇಗೆ ಚಟುವಟಿಕೆಗಳನ್ನು ಮಾಡಿದ್ದಾರೆ, ಅದರ ಫಲಾಫಲಗಳೇನು ಎಂದು ನಿರ್ಧರಿಸಲು ಸಾಮಾನ್ಯ ಸದಸ್ಯನಿಗೆ ಮಾಹಿತಿ ಸಿಗುವ ಯಾವುದೇ ವ್ಯವಸ್ಥೆಯಿಲ್ಲ ಅಲ್ಲದೆ ವಾರ್ಷಿಕ ಸಭೆಯಲ್ಲಿ ಮಂಡಿಸುವ ವರದಿಗಳ ಸಾರಾಂಶಕ್ಕಷ್ಟೇ ಸಾಮಾನ್ಯ ಸದಸ್ಯನು ಸುಮ್ಮನಾಗಬೇಕೆಂಬ ಅಪೇಕ್ಷೆ ಇಲ್ಲಿ ಇರುವಂತೆ ತೋರಿಬರುತ್ತದೆ. ಸೆಪ್ಟೆಂಬರ್ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೫ ರ ಸಂಖ್ಯೆ ೧೧ ನ್ನು ಓದಿ, ಸಾಮಾನ್ಯ ಸದಸ್ಯನು ವಿಷಯವನ್ನು ಅರಿಯಲು ಮಾಹಿತಿ ಕೇಳಿದರೆ, ಆ ಮಾಹಿತಿ ಕೋರಿಕೆ ಪದಾಧಿಕಾರಿಗಳ ಆವಕ್ರಪೆಗೆ ಒಳಗಾಗದರೆ , ಪದಾಧಿಕಾರಿಗಳು ಪ್ರಕಟಿಸಿದ ಮಾಹಿತಿಗಿಂತ ಬೇರಾವುದೇ ಮಾಹಿತಿ ಹೊರಗೆ ಬರದಂತೆ ರಕ್ಷಣಾತ್ಮಕವಾಗಿ ಈ - " ಬಂದ ವಿಷಯಗಳನ್ನು ಪರಿಶೀಲಿಸಿ, ಸೂಕ್ತ ಕಂಡ ವಿಷಯಗಳನ್ನು ಚರ್ಚಿಸಲು ಅವಕಾಶ ನೀಡಲಾಗುವದು " ಎಂಬ ಪದ ಪುಂಜ ಸೇರಿಸಲಾಗಿದೆ. ಇದು ಆಯ್ಕೆ ಮಾಡಿದವರೇ ಆಯ್ಕೆಗೊಂಡವರಿಂದ ಅಪ್ಪಣೆ ಬೇಡುವ ವಿಚಿತ್ರವಾದರೂ ಸತ್ಯ ಸಂಗತಿ. ಯಾರನ್ನು ಪ್ರತಿನಿಧಿಯಾಗಿ ಸಾಮಾನ್ಯ ಸದಸ್ಯರು ನೇಮಿಸಿದ್ದಾರೋ ಅವರಿಂದಲೇ ಅಪ್ಪಣೆ ಬೇಡಬೇಕೆಂಬ ಈ ಪದ್ದತಿಗೆ ಕೊನೆ ಹಾಡಲೇಬೆಕು. ಆದ್ದರಿಂದ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲ ಸಾಮಾನ್ಯ ಸದಸ್ಯರೂ ಒಟ್ಟಾಗಿ ಕೆಳಗಿನ ನಿರ್ಣಯಕ್ಕೆ ಒತ್ತಾಯಿಸಬೇಕು:

೧. ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ಸಭೆಯಲ್ಲಿ ಇರುವ ಹಿರಿಯ , ಅನುಭವಿ ಸದಸ್ಯರೊಬ್ಬರು ವಹಿಸಬೇಕು. ಮತ್ತು ಇವರನ್ನು, ಸೇರಿದ ಸಭಾ ಸದಸ್ಯರೆಲ್ಲ ಸೇರಿ ಆಯ್ಕೆ ಮಾಡಬೇಕು. 

೨. ಪ್ರತಿಯೊಂದು ಮಾಹಿತಿಯೂ ಸಾಮಾನ್ಯ ಸದಸ್ಯನು ಕೇಳಿದಾಗ , ಸೀಮಿತ ಅವಧಿಯಲ್ಲಿ ಆ ಮಾಹಿತಿಯನ್ನು ಸಂಪೂರ್ಣವಾಗಿ , ಸವಿವರವಾಗಿ ನೀಡುವ ಶಾಶ್ವತ ವ್ಯವಸ್ಥೆ ಜಾರಿಗೆ ಬರಬೇಕು. 

********************

ನಾನು ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು ಇದರ ಅಧ್ಯಕ್ಷರಿಗೆ ಬರೆದ ಪತ್ರಗಳೆರಡನ್ನು ತಮ್ಮೆಲ್ಲರ ಅವಗಾಹನೆಗೆ ತರುತ್ತಿದ್ದೇನೆ. 

ಅಧ್ಯಕ್ಷರು ಮತ್ತು ಪದಾಧಿಕಾರಿಗಳು,

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು ......... ಇವರಿಗೆ 

೨೦೧೨ - ೧೩ ನೇ ಸಾಲಿನ ೭೧ ನೇ ವಾರ್ಷಿಕ ಸಭೆಯ ಕಾರ್ಯಕ್ರಮ ಪಟ್ಟಿಯಲ್ಲಿ ನಮೂದಿಸಿದಂತೆ 

೫. ೨೦೧೧-೧೨ ನೇ ಸಾಲಿನ ಸದಸ್ಯರ ವಾರ್ಸಿಕ ಸಭೆಯ ನಡವಳಿಕೆಗಳನ್ನು ದೃಢೀಕರಿಸುವದು ( ನಡವಳಿಕೆಗಳನ್ನು ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ರಲ್ಲಿ ಪ್ರಕಟಿಸಿದೆ. ಗಮನಿಸುವದು ). ............ ಎಂದಿದೆ. 

ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ಓದಿದಾಗ ಸಂಖ್ಯೆ ೫ ರಲ್ಲಿ ನೀಡಿದ ಮಾಹಿತಿ ಅಪರಿಪೂರ್ಣವಾಗಿದೆಎಂಬುದು ಗಮನಿಸಬೇಕಾಗಿದೆ. ಸಭೆಯ ಆರಂಭದಲ್ಲಿ ನಾನು " ಮಹಾಸಭೆಯ ಅಧ್ಯಕ್ಷರು , ಪದಾಧಿಕಾರಿಗಳು ಒಂದು ವರುಷ ಕೈಗೊಂಡ ಚಟುವಟಿಕೆಗಳ ವಿಮರ್ಶಾತ್ಮಕ ಚಿಂತನೆಯೊಂದಿಗೆ ಈ ಸಭೆಯ ನಡಾವಳಿಗಳು ಇರಬೇಕಾದುದರಿಂದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು, ಪದಾಧಿಕಾರಿಗಳು ಹೊರತುಪಡಿಸಿ , ಸಭೆಯಲ್ಲಿದ್ದ ಒಬ್ಬ ಅನುಭವಿ, ಹಿರಿಯರನ್ನು ಸಭಾದ್ಯಕ್ಷರಾಗಿ ಆಯ್ಕೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರು , ಪದಾಧಿಕಾರಿಗಳು ಕೈಗೊಂಡ ಕಾರ್ಯಗಳ ವಿಮರ್ಷೆಯಾಗುವದು ಸೂಕ್ತ ಎಂದು ಪ್ರಸ್ತಾಪಿಸಿದ್ದೆ" . ಅಲ್ಲದೆ ತದನಂತರ ಸಭೆಯಲ್ಲಿ ಸುಮಾರು ಎಂಟರಿಂದ ಹತ್ತು ಗೌರವಾನ್ವಿತ ಸದಸ್ಯರು ವಿವಿಧ ವಿಷಯಗಳ ಕುರಿತು ಮಾತನಾಡಿದ್ದರು. ಈ ಚರ್ಚೆಗಳು ಸರಿಸುಮಾರು ಎರಡು ಮೂರು ತಾಸು ನಡೆದಿದ್ದವು. ಆದರೆ ಈ ಎಲ್ಲಾ ಚರ್ಚೆ, ಮಂಡನೆ, ಖಂಡನೆಗಳನ್ನು ಕೇವಲ ಒಂದು ಶಬ್ದ " ಇತ್ಯಾದಿಗಳ ಬಗ್ಗೆ " ಎಂದು ನಮೂದಿಸಿದ್ದೀರಿ. ಇದು ಅಸಮಂಜಸ. ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಸಭೆಯ ನಡವಳಿಕೆಗಳನ್ನೇ ಸಮಂಜಸವಾಗಿ ಸರ್ವಸದಸ್ಯರಿಗೆ ತಲುಪಿಸಲು ಸೋತರೆ ಹೇಗೆ? 

ಆದ್ದರಿಂದ ಈ ಮೇಲೆ ಅರುಹಿದ ವಿಷಯವನ್ನು ಬರುವ ಸಭೆಯಲ್ಲಿ ೨೦೧೧ - ೧೨ ನೇ ಸಾಲಿನ ಸದಸ್ಯರ ವಾರ್ಷಿಕ ಸಭೆಯ ನಡವಳಿಕೆಗಳನ್ನು ದೃಡೀಕರಿಸುವ ಮೊದಲು ಸರಿಪಡಿಸಬೇಕಾಗಿ ಕೋರಿಕೆ. 

ವಿಶ್ವಾಸಿ,

ಹರಿಹರ ಭಟ್, ಬೆಂಗಳೂರು. 

ಸದಸ್ಯತ್ವ ಸಂಖ್ಯೆ : ೬೮೭೯ / PO / ೧೦೦೦

**********************

To ,

ಅಧ್ಯಕ್ಷರು,
ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು

ಸಹೃದಯರಿಗೆ ವಂದನೆಗಳು. 

ಹವ್ಯಕ ಪತ್ರಿಕೆ ಸೆಪ್ಟೆಂಬರ್ ೨೦೧೩ ಪುಟ ೫ ರಲ್ಲಿ ನೀಡಿದ ಕಾರ್ಯಕ್ರಮದ ವಿವರಗಳು ಸಂಖ್ಯೆ ೧೧ ಪ್ರಕಾರ ಪೂರ್ವಭಾವಿಯಾಗಿ ನೀಡಬೇಕಾದ ವಿಷಯಗಳ ಬಗೆಗೆ ಈ ಮೂಲಕ ಬರೆಯುತ್ತಿದ್ದೇನೆ. ವಿಷಯವನ್ನು ಕೂಲಂಕುಶವಾಗಿ ೨೦೧೨ - ೧೩ ರ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಚರ್ಚಿಸಿ , ನಿರ್ಣಯಗಳನ್ನು ಕೈಗೊಳ್ಳಬೇಕಾಗಿ ಆಗ್ರಹಿಸುತ್ತಿದ್ದೇನೆ. 

*************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೧ ರಲ್ಲಿ ಸಂಖ್ಯೆ ೧೫ - ಹವ್ಯಕ ಜ್ವಲಂತ ಸಮಸ್ಯೆಗಳ ಪರಿಹಾರ : 

ಯಾವುದೇ ಒಂದು ಕಾರ್ಯಕ್ರಮಕ್ಕೆ ತೊಡಗಿಸಿದ ಶ್ರಮ, ಹಣ, ಇವನ್ನೆಲ್ಲ ಗಮನಿಸಿ ಕೈಗೊಂಡ ಕಾರ್ಯಕ್ರಮ ಎಷ್ಟು ಫಲಕಾರಿಯಾಯಿತು ಎಂಬುದನ್ನು ಪರಾಮರ್ಶಿಸಬೇಕು. . ಹವ್ಯಕ ಜ್ವಲಂತ ಸಮಸ್ಯೆ ಕುರಿತು ಕೈಗೊಂಡ ಯಾವುದೇ ಕಾರ್ಯಕ್ರಮ ಇನ್ನೂ ಫಲ ನೀಡಿಲ್ಲ ಅಲ್ಲದೆ ಯಾವುದೇ ರೀತಿಯ ಆಶಾದಾಯಕ ಪರಿಣಾಮ ದೊರಕುವ ಲಕ್ಷಣಗಳು ಗೋಚರಿಸುತ್ತಿಲ್ಲಾ ಎಂಬುದು ದಿನಪತ್ರಿಕಾ ವರದಿಗಳು, ವಾಹಿನಿ ಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಇತ್ಯಾದಿ ಗಮನಿಸಿದಾಗ ಕಂಡುಬರುವ ಅಂಶ. ಹವ್ಯಕ ಮಹಾಸಭೆಯ ಸಂಯೋಜನೆಯೊಂದಿಗೆ ಏರ್ಪಡಿಸಿದ ಎರಡು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ಒಂದು ಕಾರ್ಯಕ್ರಮದಲ್ಲಿ ಅರವತ್ತು , ಎಂಭತ್ತು ಜನ ಭಾಗವಹಿಸಿದ್ದರು. ಇನ್ನೊಂದು ಕಾರ್ಯಕ್ರಮದಲ್ಲಿ ಐದು, ಆರು ಜನರಿದ್ದರು ನಂತರ ಆಚೆ ಈಚೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದವರನ್ನು ಒಟ್ಟುಸೇರಿಸಿ ಹದಿನೈದು, ಹದಿನೆಂಟು ಜನ ಸೇರಿದರು. ಈ ರೀತಿ ಕಾರ್ಯಕ್ರಮಗಳನ್ನು ಸಂಯೋಜಿಸುವದರಿಂದ ಆಗಬಹುದಾದ ಅನುಕೂಲಗಳೇನು? ಈ ರೀತಿ ಕಾರ್ಯಕ್ರಮಗಳಿಂದ ಮುಖಪತ್ರಿಕೆಯ ಪುಟ ತುಂಬಬಹುದೇ ವಿನಃ ಇನ್ಯಾವುದೇ ಪ್ರಯೋಜನ ಕಂಡುಬರುವದಿಲ್ಲ. ಒಂದೆರಡು ಈ ರೀತಿ ಕಾರ್ಯಗಳನ್ನು ಮಾಡಿ ಸಫಲತೆ ಕಾಣದವರ ನೇತ್ರತ್ವದಲ್ಲೇ ಪುನಃ ಪುನಃ ಹತ್ತಾರು ಕಡೆ ಕಾರ್ಯಕ್ರಮಗಳನ್ನು ಆಯೋಜಿಸುವದರಿಂದ ಮಹಾಸಭೆಯ ದಾನಿಗಳ ಹಣ ವ್ಯರ್ಥವಾಗುವದು ತಾನೇ ?

ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿದಾಗ ಅದರಿಂದ ಅನುಕೂಲಗಳೇನಾದವು?, ಆ ರೀತಿ ಕಾರ್ಯಕ್ರಮಗಳನ್ನು ಮತ್ತೆ ಆಯೋಜಿಸಬೇಕೇ ? ಇತ್ಯಾದಿ ಅಂಶಗಳ ಕುರಿತು ವರದಿ ತಯಾರಿಸಿ, ಪದಾಧಿಕಾರಿಗಳು ಚರ್ಚಿಸಿ , ಅದರ ಸಂಪೂರ್ಣ ಮಾಹಿತಿಯನ್ನು ಸಾಮಾನ್ಯ ಸದಸ್ಯರಿಗೆ ದೊರಕುವಂತೆ ಮಾಡಬೇಕಾದುದು ಆಡಳಿತ ಮಂಡಳಿಯ ಜವಾಬ್ದಾರಿ. ಕಾರ್ಯಕ್ರಮಕ್ಕೆ ವ್ಯಯಿಸಿದ ಹಣವೆಷ್ಟು ಮುಂತಾದ ಮಾಹಿತಿ ಸಂಪೂರ್ಣವಾಗಿ ಸಾಮಾನ್ಯ ಸದಸ್ಯನೊಬ್ಬ ಬಯಸಿದರೆ ಅದನ್ನು ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಈ ರೀತಿ ಚಟುವಟಿಕೆಗಳ ಸಮಗ್ರ ಮಾಹಿತಿ ದಾಖಲಾದಲ್ಲಿ ಮುಂಬರುವ ವರ್ಷಗಳಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳುವ ಕಾರ್ಯಕಾರಿ ಮಂಡಳಿಯ ವ್ಯಕ್ತಿಗಳಿಗೆ ಅನುಕೂಲಕರ ಮಾಹಿತಿ ದೊರೆಯುವದು. 

ಆದ್ದರಿಂದ ಆಗ್ರಹಿಸುವದೇನೆಂದರೆ ಪ್ರತಿಯೊಂದು ಚಟುವಟಿಕೆ / ಕಾರ್ಯಕ್ರಮ ಹಮ್ಮಿಕೊಳ್ಳುವಾಗಲೂ ಸೂಕ್ತವಾದ ಸಮ್ಮಂದಪಟ್ಟ ವ್ಯಕ್ತಿಯಿಂದ ಮೊದಲ ಯೋಚನಾ ಮಾಹಿತಿ ( ಬಜೆಟ್ ) ಪಡೆದೇ ಹಣ ಬಿಡುಗಡೆ ಮಾಡಬೇಕು. ಅಲ್ಲದೆ ಕಾರ್ಯಕ್ರಮ ಮುಗಿದ ನಂತರ ಕಾರ್ಯಕ್ರಮದ ವರದಿ, ಸಫಲತೆ , ವೆಚ್ಚವಾದ ಹಣ ಎಲ್ಲ ಅಂಕಿ ಅಂಶಗಳೊಂದಿಗೆ ಆ ವ್ಯಕ್ತಿ ನೀಡಬೇಕು ಮತ್ತು ಈ ಎಲ್ಲ ಮಾಹಿತಿ ಮುಂದಿನ ಮೂರು ವರ್ಷಗಳ ವರೆಗೆ ಯಾವುದೇ ಸದಸ್ಯ ನೋಡಬಯಸಿದರೂ ಸಿಗುವ ವ್ಯವಸ್ಥೆ ಮಾಡಲ್ಪಡಬೇಕು. 

******************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೦ ರಲ್ಲಿ ಸಂಖ್ಯೆ ೭ : ಹವ್ಯಕ ವೈವಾಹಿಕ ಮಾಹಿತಿ ಕೇಂದ್ರ ನೋಂದಣಿಯಾದ ವರ ಮತ್ತು ವಧು ಸಂಖ್ಯೆ ನಿಡಿದ್ದೀರಿ. ಅಭಿನಂದನೆಗಳು. ಆದರೆ ಈ ವ್ಯವಸ್ಥೆಯ ಅನುಕೂಲತೆಯಿಂದ ಎಷ್ಟು ಮದುವೆಗಳಾದವು ಎಂಬ ಮಾಹಿತಿ ನೀಡಿಲ್ಲ. ಇದು ಕಣ್ತಪ್ಪಿನಿಂದ ಆದದ್ದೋ ಅಥವಾ ಒಂದೂ ಮದುವೆ ಈ ವ್ಯವಸ್ಥೆಯ ಪ್ರಯೋಜನದಿಂದ ಆಗಿಲ್ಲ ಎಂಬುದೋ ? ಕಳೆದ ಐದು ವರ್ಷಗಳಲ್ಲಿ ಈ ವ್ಯವಸ್ಥೆಯಿಂದ ಆದ ಮದುವೆಗಳ ಸಂಖ್ಯೆ ಎಷ್ಟು ಎಂಬುದನ್ನು ನೀಡಬೇಕು ಮತ್ತು ಈ ವ್ಯವಸ್ಥೆ ಹವ್ಯಕ ಸಮಾಜದಲ್ಲಿ ಹಲವು ಕಡೆ ಹಲವು ಜನರಿಂದ ಉದ್ಯೋಗವಾಗಿ ಸ್ಪರ್ಧಾತ್ಮಕ ರೀತಿ ಲಭ್ಯವಿರುವದರಿಂದ, ಮಹಾಸಭೆಯಲ್ಲಿರುವ ಈ ವ್ಯವಸ್ಥೆ ನಿರೀಕ್ಷಿಸಿದ ಪ್ರಯೋಜನ ನೀಡುವಲ್ಲಿ ವಿಫಲವಾಗಿದೆ ಎನ್ನುವದನ್ನು ಒಪ್ಪಿ ಇದನ್ನು ನಿಲ್ಲಿಸಬೇಕು / ಮುಂದುವರಿಸಬಾರದು ಎಂದು ಆಗ್ರಹ. 

******************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೨ ರಲ್ಲಿ ಸಂಖ್ಯೆ ೧೯ : ಅಂತರ್ಜಾಲ ಸಮಿತಿ 

ಅಂತರ್ಜಾಲವಿರುವದು ( website ) ಮತ್ತು ಅದಕ್ಕೊಂದು ಸಮಿತಿ ಇರುವದು ಸದಾಶಯ. ನಾವೀಗ ಇಪ್ಪತ್ತೊಂದನೇ ಶತಮಾನದ ತಾಂತ್ರಿಕ ಯುಗದಲ್ಲಿದ್ದೇವೆ. ಈ ಅಂತರ್ಜಾಲ ( website ) ವನ್ನು ವೀಕ್ಷಿಸಿದಾಗ , ಅಂತರ್ಜಾಲ ಸೌಲಭ್ಯ ಈ ಜಗತ್ತಿಗೆ ಎಂದು ಕಾಲಿಟ್ಟಿತೋ ಆ ಕಾಲದ ಅಂತರ್ಜಾಲವೊಂದನ್ನು ಭೇಟಿ ನೀಡಿದ ಅನುಭವವಾಗುವದು. ಹತ್ತಾರು ಸುವಯವಸ್ಥಿತ ಅಂತರ್ಜಾಲಗಳನ್ನು ಅಭ್ಯಸಿಸಿ , ಪ್ರತಿ ಸದಸ್ಯನೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅಂತರ್ಜಾಲವನ್ನು ಹೊಂದುವ ಅತಿ ಅವಶ್ಯಕತೆ ಇಂದಿನ ಕಾಲದ್ದಾಗಿದೆ. ಇಂದು ಹಿಂದಿನ ತಲೆಮಾರಿನ ನೇತಾರರ ಅಭಿವೃದ್ಧಿ ಯೋಚನೆಗಳನ್ನು ಪ್ರಸ್ತುತವಾಗಿಸಿ ನಮ್ಮ ಮಹಾಸಭೆ ವರ್ತಮಾನದಲ್ಲಿ ಒಂದೆರಡು ದಶಮಾನಗಳಷ್ಟು ಹಿಂದಿದೆ. ಸಮಾಜದ ಬಹುತೇಕ ಸಂಖ್ಯೆ ಯುವಜನಾಂಗ . ಆಧುನಿಕತೆಯನ್ನು ಮೈಗೂಡಿಸಿಕೊಂಡ ಅಂತರ್ಜಾಲ ವ್ಯವಸ್ಥೆ ಈ ಕೂಡಲೆ ಕೈಗೊಳ್ಳಬೇಕಾದ ಪ್ರಥಮ ಕೆಲಸ. ಸರಿಯಾದ ಅಂತರ್ಜಾಲ ವ್ಯವಸ್ಥೆಯಿಂದ ಸಮಯ ಉಳಿತಾಯ, ಹಣದ ಉಳಿತಾಯ, ಶೀಘ್ರ ಸಂಪರ್ಕ ಇತ್ಯಾದಿ ಹತ್ತು ಹಲವು ಅನುಕೂಲಗಳಿವೆ. ಸಹಜವಾಗಿ ಹಿಂದಿನ ತಲೆಮಾರಿನವರಿಗೆ ಅಂದರೆ ಅರವತ್ತು ಎಂಭತ್ತು ವಯಸ್ಸಾದವರಿಗೆ ಹೊಸ ಆಧುನಿಕ ವ್ಯವಸ್ಥೆಗೆ ಹೊಂದಿಕೊಳ್ಳುವದು ಕಷ್ಟವಾಗುತ್ತದೆ . ಹಾಗೆಂದು ಆಧುನಿಕತೆಗೆ ಮಹಾಸಭೆ ತೆರೆದುಕೊಳ್ಳದಿದ್ದರೆ ನಮ್ಮ ಯುವಜನಾಂಗ ನಿಧಾನವಾಗಿ ಈಗ ಗೋಚರಿಸುತ್ತಿರುವಂತೆ ಮಹಸಭೆಯಿಂದ ದೂರವಾದೀತು. ಆದ್ದರಿಂದ ಈ ಕೂಡಲೇ ಅತೀ ಅಧುನಿಕ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಬೇಕೆಂದು ಈ ಸಭೆ ನಿರ್ಣಯಿಸಬೇಕಾಗಿದೆ. 

********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೨ ರಲ್ಲಿ ಸಂಖ್ಯೆ ೨೨ : ವಿಪ್ರ ಶಾಸಕರಿಗೆ ಅಭಿನಂದನೆ 

ವ್ಯವಸ್ಥಿತತವಾಗಿ , ಎಲ್ಲರೂ ಅಭಿಮಾನ ಪಡುವ ರೀತಿಯಲ್ಲಿ ಈ ಕಾರ್ಯಕ್ರಮ ಸಂಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ಹತ್ತು ಹಲವಾರು ನೇತಾರರನ್ನು ಮಾತನಾಡಿಸಿದಾಗ, ಈ ಸಂಯೋಜನೆಯ ಎಲ್ಲ ಶ್ರೇಯಸ್ಸು ಶ್ರೀ ಪ್ರಶಾಂತ ಭಟ್ ರವರಿಗೆ ಸಲ್ಲಬೇಕಾದದ್ದು. ಎಲ್ಲರ ಸಹಕಾರ ಕ್ರೋಢೀಕರಿಸಿ ಈ ರೀತಿ ವ್ಯವಸ್ಥೆ ಮಾಡಿದ್ದಾರೆ ಪ್ರಶಾಂತ ಭಟ್ಟರು ಎಂದು ಬಾಯಿ ತುಂಬ ಹೊಗಳಿದ್ದರು ಅದೇ ರೀತಿ ಸಭೆಯಲ್ಲೂ ಹೊಗಳಿಕೆಯ ಮಾತುಗಳನ್ನಾಡಿದ್ದರು ಅಲ್ಲದೆ ಕಾರ್ಯಕ್ರಮದ ವರದಿ ಹವ್ಯಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗಲೂ ಈ ವಿಷಯ ನಮೂದಿಸಲ್ಪಟ್ಟಿತ್ತು. ಆದರೆ ಈಗ ಈ ವಾರ್ಷಿಕ ವರದಿಯಲ್ಲಿ ಪ್ರಶಾಂತ ಭಟ್ಟರ ಹೆಸರು ಕಾಣದಿದ್ದುದಕ್ಕೆ ವಿಶಾದವೆನಿಸಿದೆ. ಇದೇನು ಉದ್ದೇಶಪೂರ್ವಕವಾಗಿ ಆಗಿದ್ದೋ ಇಲ್ಲವೆ ಕಾಣದ ಕೈ ಈ ಬೆಳವಣಿಗೆಯ ಹಿಂದೆ ಕೆಲಸ ಮಾಡಿದೆಯೋ? ಪ್ರಶಾಂತ ಭಟ್ಟ ರ ಹೆಸರನ್ನು ನಮೂದಿಸಬೇಕೆಂದು ಈ ಮೂಲಕ ಆಗ್ರಹ. 

*************************

ಅಲ್ಲದೆ ಹಿಂದಿನ ಅಧ್ಯಕ್ಷರುಗಳ ಅಂದರೆ ಪಾಸ್ಟ್ ಪ್ರೆಸಿಡೆಂಟ್ಸ್ ಒಂದು ಕಮೀಟಿ ಇರಬೇಕೆಂದು ಸಲಹೆ. ಆ ಕಮಿಟಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ತಮ್ಮ ಹಿಂದಿನ ಅನುಭವಗಳ ಮತ್ತು ವರ್ತಮಾನದಲ್ಲಿ ನಡೆಯುತ್ತಿರುವ ಮಹಾಸಭೆಯ ಚಟುವಟಿಕೆಗಳನ್ನಾಧರಿಸಿ ತಮ್ಮ ಸಲಹೆಗಳನ್ನು ನೀಡಬೇಕು. ನೀಡಿದ ಸಲಹೆಗಳು ಮತ್ತು ಅನ್ವಯಿಸಿಕೊಂಡ ಸಲಹೆಗಳ ವರದಿ ವಾರ್ಷಿಕ ಸಭೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾದ ಗೌರವ ಕಾರ್ಯದರ್ಶಿಗಳಿಂದ ಮಂಡಿಸಲ್ಪಡಬೇಕು. ಈ ಕುರಿತು ಈಗ ನಿರ್ಣಯವಾಗಬೇಕು . 

*************************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೬ ರಲ್ಲಿ ಉಳಿತಾಯ/ ಖರ್ಚು ( ೨,೧೨,೨೭೪.೬೦ ) ಎಂದು ತೋರಿಸಿದೆ. ಈ ಮೊತ್ತ ಪ್ರಸಕ್ತ ಸಾಲಿನಲ್ಲಿ ಆದಾಯಕ್ಕಿಂತ ಹೆಚ್ಚು ವೆಚ್ಚ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ಕಳೆದ ಸಾಲಿನಲ್ಲೂ ಆದಾಯಕ್ಕಿಂತ ೩,೮೬೦೪೬.೪೨ ರೂಪಾಯಿ ಹೆಚ್ಚು ವೆಚ್ಚ ಮಾಡಲಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೂ ಹತ್ತು ಹಲವಾರು ವರ್ಷಗಳಿಂದ ಕೂಡಿಟ್ಟ ಹಣ ಖರ್ಚಾಗುತ್ತಿದೆ ಎಂಬ ಸೂಚನೆ. ಆದಾಯಕ್ಕಿಂತ ವೆಚ್ಚ ಜಾಸ್ತಿ ಮಾಡುವ ಆಡಳಿತ ಮಂಡಲಿಯ ಈ ಧೋರಣೆಯನ್ನು ಒಪ್ಪಲು ಕಷ್ಟ, ಈ ಧೋರಣೆಯೇ ಮುಂದುವರಿದಲ್ಲಿ ಮುಂದಿನ ನಾಲ್ಕಾರು ವರ್ಷಗಳಲ್ಲೇ ಆರ್ಥಿಕ ( ನಗದು ) ಮುಗ್ಗಟ್ಟು ಉಂಟಾದೀತು. ಆದ್ದರಿಂದ ಆಡಳಿತ ಮಂಡಲಿ ಈ ರೀತಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಮುಂದುವರಿಸಬಾರದೆಂದು ನಿರ್ಣಯ ಕೈಗೊಳ್ಳಬೇಕು. 

********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೬ ರಲ್ಲಿ ನಿರ್ವಹಣೆ ಮತ್ತು ಸರಿಪಡಿಸುವ ವೆಚ್ಚಗಳು ಎಂದು ರೂಪಾಯಿ ೪ ಲಕ್ಷ , ೧೪ ಸಾವಿರ , ೫೩೩ ತೋರಿಸಲಾಗಿದೆ. ಇದು ಏನೆಂಬುದು ಬಹುಷಃ ಯಾರಿಗೂ ಗೊತ್ತಗಲಿಕ್ಕಿಲ್ಲ. ಈ ಕುರಿತು ಸೂಕ್ತ ವಿವರಣೆ ನೀಡಿದ್ದರೆ ಚೆನ್ನಾಗಿತ್ತು. ಈ ರೀತಿ ಕನ್ನಡವನ್ನು ಕಬ್ಬಿಣದ ಕಡಲೆಯಾಗಿಸುವ ಬದಲು ಸುಲಭ ಶಬ್ದಗಳಲ್ಲಿ ಎಲ್ಲ ವಿವರಗಳನ್ನು ನೀಡಿದರೆ ಸಾಮಾನ್ಯ ಸದಸ್ಯನೂ ಪದಾಧಿಕಾರಿಗಳ ಕೆಲಸದ ಬಗ್ಗೆ ಗೌರವ ಹೊಂದಲು ಅನುಕೂಲವಾಗುತ್ತದೆ. ಆದ್ದರಿಂದ ಯಾವುದೇ ಖರ್ಚು ಒಮ್ಮೆ ಹತ್ತು ಸಾವಿರಕ್ಕಿಂತ ಜಾಸ್ತಿ ಆದಾಗ , ಆ ಖರ್ಚಿನ ಎಲ್ಲ ವಿವರಗಳು ಸಾಮಾನ್ಯ ಸದಸ್ಯನಿಗೆ ಪರಿಶೀಲಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಇಲ್ಲಿ ಕೋರಿಕೆ. 

**********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೭ ರಲ್ಲಿ ಸಾಲ ಹಾಗು ಮುಂಗಡ ಎಂದು ಐವತ್ತು ಸಾವಿರ ರೂಪಾಯಿ ತೋರಿಸಲಾಗಿದೆ. ಈ ಸಾಲ ಹಾಗು ಮುಂಗಡ ಯಾರ್ಯಾರಿಗೆ ನೀಡಲಾಗಿದೆ ಮತ್ತು ಲೆಕ್ಕ ಪತ್ರ ಮುಗಿಯುವವರೆಗೂ ಇದರ ಮರುಪಾವತಿ ಯಾಕಾಗಲಿಲ್ಲ ಎಂಬ ವಿವರವನ್ನು ಈ ಸಭೆಗೆ ನೀಡಬೇಕಾಗಿ ವಿನಂತಿ. 

********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೬ ರಲ್ಲಿ ಆಡಳಿತ ಮತ್ತು ಇತರೇ ವೆಚ್ಚ ರೂಪಾಯಿ ಹದಿನಾಲ್ಕು ಲಕ್ಷ ಮೂವತ್ತೊಂಭತ್ತು ಸಾವಿರ ೬೫೪. ೧೦ ಎಂದಿದೆ. ದೊಡ್ಡ ಮೊತ್ತದ ಖರ್ಚುಗಳಿಗೆ ರೂಪಾಯಿ ಹತ್ತು ಸಾವಿರ ಮೇಲೆ ಯಾವುದೇ ಒಮ್ಮೆ ಖರ್ಚು ಮಾಡಿದ ವಿವರಗಳನ್ನು ನೀಡುವದು ಸೂಕ್ತ. ಅಲ್ಲದೇ ಈ ಇತರೆ ಎಂಬುದನ್ನು ಆದಷ್ಟು ಕಡಿಮೆ ಬಳಸಿ ಅಥವಾ ಬಳಸದೆಯೇ ಅವುಗಳ ವಿವರ ನೀಡಿದರೆ ಒಂದು ಒಳ್ಳೆ ಪದ್ಧತಿಯನ್ನು ಆರಂಭಿಸಿದಂತಾಗುತ್ತದೆ. ಈ ಕುರಿತು ಈ ಸಭೆ ಸೂಕ್ತ ಗಮನನೀಡುವಂತಾಗಲಿ ಎಂಬ ಆಶಯ. 

*************************



೨೦೧೨ - ೧೩ ನೇ ಸಾಲಿನ ೭೧ ನೇ ವಾರ್ಷಿಕ ಸಭೆಯ ಕಾರ್ಯಕ್ರಮ ಪಟ್ಟಿಯಲ್ಲಿ ನಮೂದಿಸಿದಂತೆ 

( ಸೆಪ್ಟೆಂಬರ್ ೨೦೧೩ ಹವ್ಯಕ ಪತ್ರಿಕೆ ಪುಟ ೫ ) 

೫. ೨೦೧೧-೧೨ ನೇ ಸಾಲಿನ ಸದಸ್ಯರ ವಾರ್ಸಿಕ ಸಭೆಯ ನಡವಳಿಕೆಗಳನ್ನು ದೃಢೀಕರಿಸುವದು ( ನಡವಳಿಕೆಗಳನ್ನು ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ರಲ್ಲಿ ಪ್ರಕಟಿಸಿದೆ . ಗಮನಿಸುವದು ). ............ ಎಂದಿದೆ. 

ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ಓದಿದಾಗ ಸಂಖ್ಯೆ ೫ ರಲ್ಲಿ ನೀಡಿದ ಮಾಹಿತಿ ಅಪರಿಪೂರ್ಣವಾಗಿದೆಎಂಬುದು ಗಮನಿಸಬೇಕಾಗಿದೆ. ಸಭೆಯ ಆರಂಭದಲ್ಲಿ ನಾನು " ಮಹಾಸಭೆಯ ಅಧ್ಯಕ್ಷರು , ಪದಾಧಿಕಾರಿಗಳು ಒಂದು ವರುಷ ಕೈಗೊಂಡ ಚಟುವಟಿಕೆಗಳ ವಿಮರ್ಶಾತ್ಮಕ ಚಿಂತನೆಯೊಂದಿಗೆ ಈ ಸಭೆಯ ನಡಾವಳಿಗಳು ಇರಬೇಕಾದುದರಿಂದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು, ಪದಾಧಿಕಾರಿಗಳು ಹೊರತುಪಡಿಸಿ , ಸಭೆಯಲ್ಲಿದ್ದ ಒಬ್ಬ ಅನುಭವಿ, ಹಿರಿಯ ಸದಸ್ಯರನ್ನು ಸಭಾದ್ಯಕ್ಷರಾಗಿ ಆಯ್ಕೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಹವ್ಯಕ ಮಹಾಸಭಾ ಅಧ್ಯಕ್ಷರು , ಪದಾಧಿಕಾರಿಗಳು ಕೈಗೊಂಡ ಕಾರ್ಯಗಳ ವಿಮರ್ಷೆಯಾಗುವದು ಸೂಕ್ತ ಎಂದು ಪ್ರಸ್ತಾಪಿಸಿದ್ದೆ" . ಅಲ್ಲದೆ ತದನಂತರ ಸಭೆಯಲ್ಲಿ ಸುಮಾರು ಎಂಟರಿಂದ ಹತ್ತು ಗೌರವಾನ್ವಿತ ಸದಸ್ಯರು ವಿವಿಧ ವಿಷಯಗಳ ಕುರಿತು ಮಾತನಾಡಿದ್ದರು. ಈ ಚರ್ಚೆಗಳು ಸರಿಸುಮಾರು ಎರಡು ಮೂರು ತಾಸು ನಡೆದಿದ್ದವು. ಆದರೆ ಈ ಎಲ್ಲಾ ಚರ್ಚೆ, ಮಂಡನೆ, ಖಂಡನೆಗಳನ್ನು ಕೇವಲ ಒಂದು ಶಬ್ದ " ಇತ್ಯಾದಿಗಳ ಬಗ್ಗೆ " ಎಂದು ನಮೂದಿಸಿದ್ದೀರಿ. ಇದು ಅಸಮಂಜಸ. ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಸಭೆಯ ನಡವಳಿಕೆಗಳನ್ನೇ ಸಮಂಜಸವಾಗಿ ಸರ್ವಸದಸ್ಯರಿಗೆ ತಲುಪಿಸಲು ಸೋತರೆ ಹೇಗೆ? 
ಆದ್ದರಿಂದ ವಾರ್ಷಿಕ ಸಭೆಯ ನಡವಳಿಕೆಗಳನ್ನು ಸಂಪೂರ್ಣವಾಗಿ ಯಾವುದೇ ಚರ್ಚೆಯನ್ನು ಕಡೆಗಾಣಿಸದೆ ದಾಖಲಿಸುವ ವ್ಯವಸ್ಥೆಯಾಗಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಬೇಕು. 

***************************

ಪೆಬ್ರವರಿ ೨೦೧೩ ಹವ್ಯಕ ಪತ್ರಿಕೆ ಪುಟ ೮ :

ಸಂಖ್ಯೆ ೯ : ಸಭೆಯಲ್ಲಿ ಚರ್ಚಿಸಲು ಸದಸ್ಯರಿಂದ ಪೂರ್ವಭಾವಿಯಾಗಿ ಬಂದ ವಿಷಯವನ್ನು ಚರ್ಚಿಸುವದು :

ನಿವೇಶನದಾರರ ಸಮಸ್ಯೆ, ಲೆಕ್ಕ ಪತ್ರದ ವಿವರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ...................... 

ಈ ಕುರಿತು ಆದ ಬೆಳವಣಿಗೆಗಳೇನು ? ನೊಂದ ಸದಸ್ಯರ ಸಮಸ್ಯೆ ಪರಿಹಾರ ಕಂಡಿತೇ ? ಈ ರೀತಿ ಮತ್ತೆ ಸಮಸ್ಯೆಗಳು ತಲೆದೋರದಂತೆ ಯಾವ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದೀರಿ? ಸಮಸ್ಯೆಗೆ ಕಾರಣ ಪುರುಷರನ್ನು ಮಹಾಸಭೆಯ ಆರ್ಥಿಕ ಚಟುವಟಿಕೆಗಳಿಂದ ದೂರವಿಡಲು ಕೈಕೊಂಡ ಕ್ರಮಗಳೇನು? ಎಂದು ಈ ಸರ್ವ ಸದಸ್ಯರ ವಾರ್ಷಿಕ ಸಭೆಗೆ ತಿಳಿಸಬೇಕು. 

*********************************

ಡಿಸೆಂಬರ ೨೦೧೧ ಹವ್ಯಕ ಪತ್ರಿಕೆ ಪುಟ ೭ : 

ಸಂಖ್ಯೆ ೧೦ ರಲ್ಲಿ ರೈಲು ಮಾರ್ಗ ವಿಸ್ತರಣೆಯ ಬಗ್ಗೆ ಮಹಾಸಭೆ ಪ್ರಯತ್ನ ಮುಂದುವರಿಸಲಿದೆಯೆಂದು ಅದ್ಯಕ್ಷರು ತಿಳಿಸಿದ್ದರು ಎಂದು ಉಲ್ಲೇಖವಿದೆ. ತಾಳಗುಪ್ಪಾದಿಂದ ಶಿರಸಿ, ಸಿದ್ದಾಪುರ, ದಂಡೇಲಿ ಹಾಗೂ ತಾಳಗುಪ್ಪಾದಿಂದ ಹೊನ್ನಾವರ ರೇಲ್ವೆ ಸಂಪರ್ಕಕ್ಕೆ ಪ್ರಯತ್ನಿಸಲಾಗುವದು ಎಂದು ಅದ್ಯಕ್ಷರು ಸರ್ವ ಸದಸ್ಯರ ಸಭೆಯಲ್ಲಿ ನೀಡಿದ ಆಶ್ವಾಸನೆ ಕುರಿತು ಕೈಗೊಂಡ ಕಾರ್ಯಗಳಾವವು ಎಂದು ಈ ಸಭೆಗೆ ತಿಳಿಸಬೇಕಾಗಿ ಆಗ್ರಹ. 

**********************************

ಸೆಪ್ಟೆಂಬರ್ ೨೦೧೨ ಹವ್ಯಕ ಪತ್ರಿಕೆ ಪುಟ ೯

ಸಂಖ್ಯೆ ೨೭ ರಲ್ಲಿ, ನಿಯಮಾವಳಿ ತಿದ್ದುಪಡಿ ಸಮಿತಿ : ಕಾರಣಾಂತರದಿಂದ ಸಭೆಯ ಕಲಾಪವು ಮುಂದುವರಿಯದೆ ................... ಈ ಕಾರಣಗಳನ್ನು ಹೋಗಲಾಡಿಸಿ ನಿಯಮಾವಳಿಗಳನ್ನು ವರ್ತಮಾನಕ್ಕೆ ಪ್ರಸ್ತುತವಾಗುವಂತೆ ಬದಲಾವಣೆಗಳನ್ನು ತರಲು ಯಾವ ರೀತಿ ಪ್ರಯತ್ನಿಸಲಾಗಿದೆ ಎಂದು ಈ ಸಭೆಗೆ ವಿಸ್ತ್ರತವಾಗಿ ತಿಳಿಸಬೇಕೆಂದು ವಿನಂತಿ. 


************************************


ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಒಂದು ವರ್ಷದ ಅವಧಿ ತುಂಬಾ ಕಡಿಮೆಯಿರುವದರಿಂದ ತನ್ನ ಕರ್ತತ್ವ ಶಕ್ತಿಯನ್ನು ಕಾರ್ಯಕ್ರಮಗಳಲ್ಲಿ ಹೊರಹೊಮ್ಮಲು , ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮಯವನ್ನು ಎರಡು ವರ್ಷ ಅವಧಿಗೆ ಹೆಚ್ಚಿಸಿ , ಆಯ್ಕೆಯನ್ನು ಎರಡು ವರ್ಷಗಳಿಗೊಮ್ಮೆ ವ್ಯವಸ್ಥೆಗೊಳಿಸಬೇಕೆಂದು ಈ ಸಭೆ ನಿರ್ಣಯಿಸಲು ಪ್ರಸ್ಥಾಪಿಸುತ್ತೇನೆ. 

*************************************

ವಿಶ್ವಾಸಿ,

ಹರಿಹರ ಭಟ್, ಬೆಂಗಳೂರು. 

ಸದಸ್ಯತ್ವ ಸಂಖ್ಯೆ : ೬೮೭೯ / PO / ೧೦೦೦

A letter from Shri. Kalgar Giri, Honourable Member of Shree Akhila Havyaka Mahasabha ( R ) Bangalore.

A letter from Shri. Kalgar Giri, Honourable Member of Shree Akhila Havyaka Mahasabha ( R ) Bangalore.



ಅನ್ಯಾಯದ ವಿರುದ್ದ ಮತ್ತೊಂದು ಹೋರಾಟ.............

ಗೆ: 
೧. ಶ್ರೀ ಜಿ ಕೆ ಭಟ್, 
ಮುಖ್ಯ ಚುನಾವಣಾಧಿಕಾರಿಗಳು,
ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು.

೨. ಶ್ರೀ ,ಡಿ. ವಿ. ಹೆಗಡೆ,
ಗೌರವ ಪ್ರಧಾನ ಕಾರ್ಯದರ್ಶಿಗಳು
ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು

ಮಾನ್ಯರೇ,

ವಿಷಯ: ಮಹಾಸಭೆಯ ಪ್ರಸಕ್ತ ಸಾಲಿನ ಚುನಾವಣೆಯ ಬಗ್ಗೆ

ನಾನು ಹವ್ಯಕ ಮಹಾಸಭೆಯ ಸದಸ್ಯನಾಗಿದ್ದು ( ಸ.ಸಂ ....) ಮಹಾಸಭೆಯ ಸೆಪ್ಟೆಂಬರ್ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾದ ಚುನಾವಣಾ ಅಧಿಸೂಚನೆಯನ್ನು ಮತ್ತು ವೇಳಾಪಟ್ಟಿಯನ್ನು ಗಮನಿಸಲಾಗಿ, ಅದರಲ್ಲಿ ಈ ಕೆಳಗಿನ ಲೋಪದೋಷಗಳನ್ನು ತಮ್ಮ ಗಮನಕ್ಕೂ ತರಲು ಈ ಮೂಲಕ ಇಚ್ಚಿಸುತ್ತೇನೆ.
೧. ಸದರಿ ವೇಳಾಪಟ್ಟಿಯ ಪ್ರಕಾರ, ಚುನಾವಣಾ ದಿನಾಂಕದಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯ್ಹಾನ್ನ ೧.೩೦ ರ ವರೆಗೆ ಮತದಾನದ ಸಮಯವನ್ನು ನಿಗದಿಪಡಿಸಲಾಗಿದೆ. ನಮ್ಮ ಮಹಾಸಭೆಯಲ್ಲಿ ಸುಮಾರು ೧೫೦೦೦ ಕ್ಕೂ ಮಿಕ್ಕಿ ಮತದಾರರಿದ್ದು, ನಿಗದಿಪಡಿಸಿದ ವೇಳೆಯಲ್ಲಿ ಸಮಯಾವಕಾಶದ ಕೊರತೆಯಿಂದ ಮತದಾನಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ತಾವು ಸೂಕ್ತ ಸಂಖ್ಯೆಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯುವುದರ ಮೂಲಕ ಸೂಕ್ತ ಮತದಾನಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
೨. ಸದರಿ ಅಧಿಸೂಚನೆಯಲ್ಲಿ, ತಾವು ಚುನಾವಣೆಯ ಸ್ಥಳದ ವಿವರ ಮತ್ತು ಸ್ಥಾಪಿಸಲಾಗುವ ಮತದಾನ ಕೇಂದ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರುವುದು ಕಂಡುಬಂದಿರುವುದಿಲ್ಲ.
೩. ಮತದಾನಕ್ಕೆ ಸಂಬಂಧಿಸಿದಂತೆ, ಸದರಿ ಪತ್ರಿಕೆಯಲ್ಲಿ, ಪ್ರತಿ ಮತದಾರನಿಗೂ ಮತದಾನ ಮಾಡಲು ೬ ತಿಂಗಳೊಳಗಿನ ಹವ್ಯಕ ಪತ್ರಿಕೆ ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆಯ ಪ್ರತಿಯನ್ನು ತರಲು ಸೂಚಿಸಿದ್ದು ತಮ್ಮ ಗಮನಕ್ಕೆ ಈ ಮೂಲಕ ತರಬಯಸುತ್ತೇನೆ.
ಹವ್ಯಕ ಪತ್ರಿಕೆಯನ್ನು ಸದಸ್ಯರ ವಿಳಾಸಕ್ಕೆ ತಲುಪಿಸುವುದು ಹವ್ಯಕ ಮಹಾಸಭೆಯ ಜವಾಬ್ದಾರಿಯಾಗಿದ್ದು, ಸಾಮಾನ್ಯ ಅಂಚೆಯ ಮೂಲಕ ಕಳುಹಿಸಲಾಗುತ್ತದೆ. ಪತ್ರಿಕೆ ಯಾವುದೇ ಕಾರಣಕ್ಕೆ ತಲುಪದೇ ಇದ್ದು, ಅದನ್ನು ಮತದಾನದ ಸಮಯದಲ್ಲಿ ಹಾಜರುಪಡಿಸದೆ ಇದ್ದರೆ, ಮತದಾನದ ಹಕ್ಕನ್ನು ತಿರಸ್ಕರಿಸುವುದು ಸದಸ್ಯರ ಹಕ್ಕಿನ ಉಲ್ಲಂಘನೆಯಾಗಿರುತ್ತದೆ.
ಕೆಲವು ಸದಸ್ಯರು ನೋಂದಣೀ ಮಾಡುವಾಗ, ಸಭೆಯ ನಿಯಮಾವಳಿಗಳ ಪ್ರಕಾರ ಪತ್ರಿಕೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಅಥಾವ ಮನೆಯಲ್ಲಿ ಅನೇಕ ಜನ ಸದಸ್ಯರಿದ್ದು ತಮ್ಮ ಹೆಸರಿಗೆ ಪತ್ರಿಕೆ ಕಳುಹಿಸದಿರಲು ಕೋರಿರುತ್ತಾರೆ. ಅಂತಹ ಸದಸ್ಯರು ಮತದಾನದ ಸಮಯದಲ್ಲಿ ಪತ್ರಿಕೆಯನ್ನು ಹಾಜರುಪಡಿಸುವುದು ಅಸಾದ್ಯವಾಗಿರುತ್ತದೆ. ಈ ಕಾರಣಕ್ಕಾಗಿ ಮತದಾನದ ಹಕ್ಕನ್ನು ತಿರಸ್ಕರಿಸುವುದು ಕಾನೂನು ಬಾಹಿರವಾಗಿರುತ್ತದೆ.
ಹಾಗೆಯೇ, ಸದಸ್ಯತ್ವ ನೋಂದಣಿ ಮಾಡುವಾಗ, ಮಹಾಸಭೆಯು ಯಾವುದೇ ಸದಸ್ಯರ ಭಾವಚಿತ್ರ ಅಥವಾ ಗುರುತಿನ ದಾಖಲೆಯನ್ನು ಪಡೆದಿರುವುದಿಲ್ಲ. ಇಂತಹ ಸಂದರ್ಭದಲ್ಲಿ, ದಾಖಲೆಯ ಪ್ರತಿಯನ್ನು ಮೂಲ ಪ್ರತಿಯಿಲ್ಲದೇ ಗುರುತಿಸಲು ಅಸಾಧ್ಯ ಮತ್ತು ಒಂದೇ ರೀತಿಯ ಹೆಸರನ್ನು ಹೊಂದಿದ ವ್ಯಕ್ತಿಗಳು ತಮ್ಮ ಗುರುತಿನ ದಾಖಲೆಯ ಪ್ರತಿಯೊಂದಿಗೆ ಬಂದು ನಕಲಿ ಮತದಾನಕ್ಕೆ ಅವಕಾಶವಾಗುತ್ತದೆ.
೪. ಮಹಾಸಭೆಯು ೧೫೦೦೦ ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಭಾರತದಾದ್ಯಂತ ಮತ್ತು ಹೊರದೇಶಗಳಲ್ಲಿ ವಾಸಿಸುತ್ತಿದ್ದು, ಸೂಕ್ತ ಸಂಖ್ಯೆಗಳಲ್ಲಿ ಆಯಾ ಪ್ರಾಂತ್ಯವಾರು ಮತದಾನ ಕೇಂದ್ರಗಳ ಅವಶ್ಯಕತೆಯಿದ್ದು, ಆ ಬಗ್ಗೆ ಚುನಾವಣಾ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಹೊರಭಾಗಗಳ ಮತದಾರರಿಗೆ ಅಂಚೆ ಮತದಾನದಂತಹ ಸೂಕ್ತ ವ್ಯವಸ್ಥೆ ಮಾಡಲು ತಮ್ಮಲ್ಲಿ ವಿನಂತಿಸುತ್ತಿದ್ದೇನೆ.
ಈ ಮೇಲಿನ ಎಲ್ಲಾ ಅಂಶಗಳನ್ನು ತಾವು ಕೂಲಂಕುಷವಾಗಿ ಪರಿಶೀಲಿಸಿ, ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡು, ಮುಕ್ತ ನಿರ್ಭೀತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕಾಗಿ ಒತ್ತಾಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಮತ್ತು ಈ ಮೇಲಿನ ಸಮಸ್ಯೆಗಳಿಗೆ ಕೈಗೊಂಡ ಕ್ರಮಗಳ ಬಗ್ಗೆ ದಿನಾಂಕ ೧೫/೧೦/೨೦೧೩ ರ ಒಳಗಾಗಿ ಸೂಕ್ತವಾದ ಲಿಖಿತ ಉತ್ತರವನ್ನು ತಮ್ಮಿಂದ ಬಯಸುತ್ತೇನೆ.

ಹವ್ಯಕರ ಸಂಘಟನೆಯ ಚುನಾವಣೆ

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು - ಹವ್ಯಕರ ಈ ಸಂಘಟನೆಯ ಚುನಾವಣೆ 

ಪ್ರಕ್ರಿಯೆಗಳು ಜಾರಿಯಲ್ಲಿರುವದು ತಮಗೆಲ್ಲ ಗೊತ್ತಿದೆಯಷ್ಟೇ. ಸಂಘಟನೆಯ ಹಾಲಿ ಪದಾಧಿಕಾರಿ 

ಸದಸ್ಯರೊಬ್ಬರು ಮಹಾಸಭೆಯ ಕಾರ್ಯಾಲಯವನ್ನು ತಮ್ಮ ಚುನಾವಣಾ ಲಾಭದ ದೃಷ್ಟಿಯಿಂದ 

ದುರುಪಯೋಗಪಡಿಸಿಕೊಳ್ಳುತ್ತಿರುವದು ಗಮನಕ್ಕೆ ಬಂದಿದೆ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಿ.

ದೊರೆತಿರುವ ಚುನಾವಣಾ ಅವಕಾಶವನ್ನು ಸದುಪಯೋಗಗೊಳಿಸಿ, ಅರ್ಹರನ್ನು ಆಯ್ಕೆ ಮಾಡಿ.



The election for the posts of Directors of Shree Akhila Havyaka Mahasabha (R), Bangalore is to be held on 20 th October, Sunday. There are nine candidates in the fray for the four vacant posts. I am one of the candidates. Today, I have met the election officer Shri. G K Bhat and submitted an appeal that is considered favorably.

Please, study the copy of that application given below.



ಗೆ,
ದಿನಾಂಕ: ೧೧. ೧೦. ೨೦೧೩ 

ಶ್ರೀ . ಜಿ. ಕೆ ಭಟ್ಟ 

ಚುನಾವಣಾಧಿಕಾರಿಗಳು 

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು. 

೨೦. ೧೦. ೨೦೧೩ ರಂದು ನಡೆಯಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಚುನಾವಣೆಯಲ್ಲಿ ಮಹಾಸಭೆಯ ಹಾಲಿ ಪದಾಧಿಕಾರಿ ಶ್ರೀ ಪ್ರಶಾಂತಕುಮಾರ ಜಿ ಭಟ್ಟ ರವರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದವರಾಗಿದ್ದಾರೆ. ಅವರು ಮಹಾಸಭೆಯ ಕಾರ್ಯಾಲಯವನ್ನು ತಮ್ಮ ಚುನಾವಣೆ ಗೆಲುವಿಗಾಗಿ ಅನಧಿಕ್ರತವಾಗಿ ಬಳಸುತ್ತಿರುವದು , ಸಭೆನಡೆಸುವದುಇತ್ಯಾದಿ ದುರುಪಯೋಗಗಳು ನನ್ನ ಗಮನಕ್ಕೆ ಬಂದಿವೆ. 

೧ ) ಆದ ಕಾರಣ ಚುನಾವಣೆ ಮುಗಿಯುವವರೆಗೆ ಶ್ರೀ ಪ್ರಶಾಂತಕುಮಾರ ಜಿ ಭಟ್ಟ ರವರು ಶ್ರೀ ಅಖಿಲ ಹವ್ಯಕ ಮಹಾಸಭಾ ಕಾರ್ಯಾಲಯ ಪ್ರವೇಶಿಸದಂತೆನೋಡಿಕೊಳ್ಳಬೇಕಾಗಿ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಅದ್ಯಕ್ಷರಿಗೆ ಆಜ್ಞೆ ನೀಡಬೇಕಾಗಿ ಬೇಡಿಕೊಳ್ಳುತ್ತೇನೆ. ಮತ್ತು 

೨) ಶ್ರೀ ಅಖಿಲ ಹವ್ಯಕ ಮಹಾಸಭೆಯು ಸಾಮಾನ್ಯ ಸದಸ್ಯ ಅಭ್ಯರ್ಥಿಗೆ ನೀಡುವ ಸೌಲಭ್ಯವನ್ನಷ್ಟೇ ಅವರಿಗೂ ನೀಡುವಂತೆ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರು , ಪದಾಧಿಕಾರಿಗಳು, ಕಾರ್ಯಾಲಯ ಸಿಬ್ಬಂದಿ ಎಲ್ಲರಿಗೂ ಆಜ್ಞೆ ನೀಡಬೇಕಾಗಿ ಬೇಡಿಕೊಳ್ಳುತ್ತೇನೆ. ಅಲ್ಲದೆ 

೩) ಈ ಚುನಾವಣೆ ಮುಗಿದು ಫಲಿತಾಂಶ ಘೋಶಣೆಯಾಗುವವರೆಗೆ ಶ್ರೀ ಪ್ರಶಾಂತಕುಮಾರ ಜಿ ಭಟ್ಟ ರವರು ಶ್ರೀ ಅಖಿಲ ಹವ್ಯಕ ಮಹಾಸಭಾ ಕಾರ್ಯಾಲಯ ಪ್ರವೇಶಿಸದಂತೆ ಪ್ರಶಾಂತಕುಮಾರ ರವರಿಗೆ ತಡೆಯಾಜ್ಞೆ ನೀಡಬೇಕಾಗಿ ಪ್ರಾರ್ಥಿಸುತ್ತೇನೆ. 

ತಮ್ಮ ವಿಶ್ವಾಸಿ,

ಹರಿಹರ ಎಸ್ ಭಟ್ಟ 

ಅಖಿಲ ಹವ್ಯಕ ಮಹಾಸಭಾ ಚುನಾವಣೆ ೨೦೧೩ ರ ಅಭ್ಯರ್ಥಿ . 

mobile no. 99450 04681






ಮನುಷ್ಯನಿಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಹವ್ಯಕ ಸಮಾಜ, ಹವ್ಯಕರು ಸಂಸ್ಕ್ರತಿ ಯುಳ್ಳವರು ಎಂಬುದು ಪ್ರಶ್ನಾತೀತವಾಗಿ ಅನೂಚಾನಾಗಿ ನಡೆದುಬಂದಿರುವ ನಂಬಿಗೆ.


ಹಳ್ಳಿಯ ಮನೆಗಳಲ್ಲಿ ಮನೆಯ ಯಜಮಾನನಿಂದಾದಿಯಾಗಿ ಎಲ್ಲರೂ ಅತಿಥಿಯನ್ನು ಆತ್ಮೀಯವಾಗಿ ಪ್ರತಿಸಾರಿಯೂ , ಬೇಕಿದ್ದರೆ ನಿನ್ನೆ ಬಂದವನೇ ಇಂದು ಬರಲಿ, ದಿನವೂ ಬರುವವನೇ ಇರಲಿ , ಸ್ವಾಗತಿಸುವ ಕ್ರಮ ಅಜ್ಜನಿಂದ - ಮಗನಿಗೆ , ಮಗನಿಂದ - ಮೊಮ್ಮಗನಿಗೆ , ಮೊಮ್ಮಗನಿಂದ - ಮಿಮ್ಮಗನಿಗೆ, ಮಿಮ್ಮಗನಿಂದ - ಮರಿಮಗನಿಗೆ ............ ಹೀಗೇ ಅನೂಚಾನಾಗಿ ನಡೆದುಬಂದ ಸಂಸ್ಕೃತಿ ಹವ್ಯಕ ಸಮಾಜದ್ದು. ಈ ದಿನಗಳಲ್ಲಿ ಈ ಸಂಸ್ಕೃತಿಗೆ ಕುಂದು ಬರುತ್ತಿದೆ ಎಂಬುದು ವಿಶಾದನೀಯ ಸಂಗತಿ. ಪೇಟೆ ಮನೆಗಳಲ್ಲಂತೂ ಅಪ್ಪನ ಪರಿಚಯದವರು ಬಂದರೆ ಅಪ್ಪ ಅಷ್ಟೇ , ಅಮ್ಮನ ಪರಿಚಯದವರು ಬಂದರೆ ಅಮ್ಮ ಅಷ್ಟೇ , ಮಗನ ಪರಿಚಯದವರು ಬಂದರೆ ಮಗನಷ್ಟೇ .......... ಹೀಗೆ ಮಾತನ್ನಾಡಿಸಿ ಕಳಿಸುವ ಬದಲಾದ ಜೀವನ ರೀತಿ ಎಲ್ಲೆಡೆ ಕಾಣಬಹುದು. ಮಧ್ಯೆ ಕೆಲವು ದಶಕಗಳಲ್ಲಿ ಅತಿಥಿ ಬಂದಾಗ ಹಾಯ್ ಎನ್ನುವದು ಅಥಿತಿ ಹೋಗುವಾಗ ಬಾಯ್ ಅನ್ನುವದು ಇತ್ತು. ಈಗೀಗ ಕಂಪ್ಯೂಟರ್, ಮೊಬೈಲ್ , ಲ್ಯಾಪ್ಟಾಪ್, ಐಪೆಡ್ , ಐಪೊಡ್ ಗಳಲ್ಲಿ ಮುಳುಗಿರುವ ಇಂದಿನ ಜನಾಂಗದ ಮಕ್ಕಳು ಹಾಯ್ , ಬಾಯ್ ಹೇಳಲೂ ಪುರುಸೊತ್ತಿಲ್ಲದವರಾಗಿದ್ದಾರೆ .


ಇನ್ನು ಹೀಗೆ ಬದಲಾವಣೆಗಳು ನಮ್ಮ ಪ್ರತಿನಿಧಿ ಸಂಸ್ಥೆ ಹವ್ಯಕ ಮಹಾಸಭೆಯನ್ನು ಬಿಟ್ಟೀತೇ ? ಮೊದಲೆಲ್ಲಾ ಇರದಿದ್ದ ಚೇಂಬರ್ ಸಂಸ್ಕ್ರತಿ , ಈ ಹತ್ತು ವರ್ಷಗಳಿಂದೀಚೆ ನಮ್ಮ ಮಹಾಸಭೆಯನ್ನೂ ಆವರಿಸಿಬಿಟ್ಟಿದೆ. ಯಾವ ಮಹಾಶಯರು , ಚೇಂಬರ್ ಇಲ್ಲದ ಅಧ್ಯಕ್ಷರು ಕಿರೀಟವಿಲ್ಲದ ರಾಜನಂತೆ ಎಂದು ನಿರ್ಧರಿಸಿದರೂ ಏನೋ , ಮೊದಲಿಲ್ಲದ ಚೇಂಬರ್ , ಚೇಂಬರ್ ಸಂಸ್ಕ್ರತಿ ನಿಧಾನವಾಗಿ ಮಹಾಸಭೆಯನ್ನೂ ಜೊತೆ ಜೊತೆಗೆ ಸಾಮಾನ್ಯವಾಗಿ ಚುರುಕಾಗಿ ಓಡಾಡಿ , ಸಮಾಜದ ಕೆಲಸಗಳಲ್ಲಿ ತೊಡಗಿಕೊಂಡವರನ್ನೂ ಬಹುಮಟ್ಟಿಗೆ ಆವರಿಸಿಬಿಟ್ಟಿದೆ. ಉಳಿದವರನ್ನು ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆ ಎಂಬಂತೆ ತನ್ನ ಮಾರ್ಜಾಲ ನಡಿಗೆಗಳಲ್ಲಿ ಈ ಬದಲಾವಣೆಗಳು ಆವರಿಸಿಕೊಳ್ಳುವ ದಿನಗಳು ದೂರವಿರಲಿಕ್ಕಿಲ್ಲ. ಈ ಚೇಂಬರ್ ಸಂಸ್ಕ್ರತಿಯ ಪರಿಣಾಮಗಳೇ , ಚೇಂಬರ್ ನಲ್ಲಿ ಕುಳಿತವರಿಗೆ ಚೇಂಬರ್ ನಿಂದ ಈಚೆ ಬಂದಾದಮೆಲೆ ಅಥವಾ ಚೇಂಬರ್ ಬಿಟ್ಟು ಮಾಜಿಯಾದಮೇಲೆ ಉಳಿದವರ ಜೊತೆ ಸರಿ - ಸರಿ ಕುಳಿತುಕೊಳ್ಳಲು ಅಥವಾ ಸ್ಟೇಜ್ ಕಟ್ಟೆ ಕೆಳಗೆ ಕುಳಿತುಕೊಳ್ಳುವದೆ ಮುಜುಗರದ ಸಂಗತಿ. ಅಲ್ಲದೆ ಚೇಂಬರ್ ಸಂಸ್ಕ್ರತಿಯ ಪರಿಣಾಮವೆಂದರೆ ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಚೇಂಬರ್ ತಲುಪಿ ಚೇಂಬರ್ ಇಲ್ಲವಾದೊಡನೆ , ಸಕ್ರಿಯತೆಯೆಲ್ಲ ಪರಾರಿಯಾಗಿ ನಿಷ್ಕ್ರಿಯರಲ್ಲ ಎಂಬ ಪುರಾವೆಗೆ ವರ್ಷಕ್ಕೊಮ್ಮೆ , ಎರಡು ಬಾರಿ ತಮ್ಮ ಉಪಸ್ತಿತಿ ಕರುಣಿಸಿ ಸಾಗುವ ಪರಿ , ಹಿಂದೆ ನಗುವವರು ಸರಿ, ಮುಂದೆ (ನೇರ) ಹೇಳುವವರ ಇರಿ ಎಂಬುದಕ್ಕೆ ಇಂಬು ಕೊಡುವಂತಿರುತ್ತದೆ. 



ಹೀಗೆಲ್ಲ ಬರೆಯುವದರಿಂದ ಬದಲಾವಣೆಗಳನ್ನು ನಿರೀಕ್ಷಿಸುವಂತೇನೂ ಇಲ್ಲ. ಹಾಗೆಂದು ಬದಲಾವಣೆ ಬರುವದಿಲ್ಲ ಎಂದಿಲ್ಲ. ಆವೇಶದ ಬದಲಾವಣೆಗಳು ಬಹುಕಾಲ ನಿಲ್ಲುವಂತಹದ್ದಾಗಿರುವದಿಲ್ಲ . ಹಾಗಾಗಿ ಬದಲಾವಣೆಗಳು ಅದರದೇ ಆದ ಓಘದಲ್ಲಿ ಬರಲಿ. ಸಕಾಲಿಕ ಬದಲಾವಣೆಗಳೂ ಬೇಕು ಎನ್ನುವ ಚಿಂತನೆಯತ್ತ ಈ ಅಕ್ಷರಗಳು ಪ್ರಚೋದಿಸಲಿ ಎಂಬುದೇ ಹಾರೈಕೆ.


ಧೀ ಯೋ ಯೋ ನಃ ಪ್ರಚೋದಯಾತ್ .



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
www .hariharbhat .blogspot .com

Jan 25 , 2013.

ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು ಮೇನೇಜರ್ ಟಿ. ಜಿ . ಹೆಗಡೆ

........ ಜೈ ಹೋ , ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು ಮೇನೇಜರ್ ಟಿ. ಜಿ . ಹೆಗಡೆ ........... 


ಸೆಪ್ಟೆಂಬರ್ ೨೦೧೩ ರ ಹವ್ಯಕ ಮಾಸಪತ್ರಿಕೆ ಓದುತ್ತಿದ್ದಾಗ ಆನಂದ ಭಾಷ್ಪಗಳೆರಡು ಉದುರಿದವು. ಪುಟ ಹದಿಮೂರರಲ್ಲಿ ಬರೆದ " ಮಹಾಸಭೆಯ ವ್ಯವಸ್ತಾಪಕರಾದ ಶ್ರೀ ಟಿ. ಜಿ. ಹೆಗಡೆಯವರು ಕಳೆದ ಒಂದು ವರ್ಷದಿಂದ ಯಾವುದೇ ವೇತನವನ್ನಾಗಲೀ, ಭತ್ಯೆಯನ್ನಾಗಲಿ ಸ್ವೀಕರಿಸದೆ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. " ಸಾಲುಗಳನ್ನು ಓದಿದಾಗ , ಶ್ರೀ ಹೆಗಡೆಯವರು ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಗೆ ಸಾಲುಗಳು ಸಾಲಲಿಲ್ಲ ಎನಿಸಿತು. ಅದಕ್ಕೇ ಅಭಿನಂದನೆ ಜೊತೆ ನಾಲ್ಕಾರು ಸಾಲುಗಳು ಹೀಗೆ.


ಹೆಗಡೆಯವ್ರೇನು ಆಗರ್ಭ ಶ್ರೀಮಂತರ ಮನೆತನದಿಂದ ಬಂದವರಲ್ಲ. ಆದರೆ ಸಮಯ ಕೂಡಿಬಂದಾಗ, ಪರಿಶ್ರಮ ಫಲ ನೀಡಿದಾಗ, ದೇವರು ಸಂಪ್ರೀತನಾದಾಗ ಮನುಷ್ಯ ತನ್ನ ಸಮಾಜಕ್ಕೇನು ತಿರುಗಿ ನೀಡಬಲ್ಲನು ಎನ್ನಲು ಹೆಗಡೆಯವರ ನಡೆ ಆದರ್ಶಪ್ರಾಯ . ಕೈ ತುಂಬ ಸಂಬಳ ತರುವ ಮಕ್ಕಳಿಬ್ಬರನ್ನು , ಸೊಸೆಯಂದಿರನ್ನು ಪಡೆದಿರುವ ಹೆಗಡೆಯವರು ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಮಹಾಸಭೆಯ ವ್ಯವಸ್ತಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾಸಭೆ ಎಂದೊಡನೆ ಮೊದಲ ಸಂಪರ್ಕಕ್ಕೆ ಸಿಗುವದೇ ಹೆಗಡೆಯವರು. ಸದಾ ಹಸನ್ಮುಖಿ, ಸೇವಾ ಮನೋಭಾವವನ್ನೇ ಮೈಗೂಡಿಸಿಕೊಂಡಿರುವ ಹೆಗಡೆಯವರು ಪ್ರತಿಯೊಬ್ಬರನ್ನು ಮನೆ ಮಂದಿಯಂತೆ ಮಾತನಾಡಿಸುವ ಪರಿಯೇ ಅವರನ್ನು ಜನಾನುರಾಗಿಯಾಗಿಸಿದೆ. ಮಹಾಸಭೆ ಎಂದೊಡನೆ ಎಲ್ಲರ ಮನಸ್ಸಿನಲ್ಲೂ ಒಮ್ಮೆ, ಟಿ. ಜಿ. ಹೆಗಡೆಯವರ ಮುಖವೇ ಎದುರು ಕಾಣಿಸುವದು. ಆ ರೀತಿ ಆತ್ಮೀಯವಾಗಿರುವ ಅವರ ನಡೆ ನುಡಿಯೇ ಅವರಿಗೆ ಶ್ರೀ ರಕ್ಷೆಯಾಗಿ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.



ತನಗೆ ಜೀವನದಲ್ಲಿ ಅನುಕೂಲಗಳೊದಗಿ ಬಂದಾಗ, ತಾನು ಸಂಬಳ ಪಡೆದು ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ , ಸಂಬಳ ಪಡೆಯದೆ , ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ತನ್ನಿಂದ ಈ ರೀತಿ ಸೇವೆಯೊದಗಲಿ ಎಂಬ ವಿಶಾಲ ಹೃದಯದ ನಿರ್ಣಯ ಕೈಗೊಳ್ಳುವದು ಸುಲಭದ ಮಾತಲ್ಲ. ಈ ನಿರ್ಣಯಕ್ಕೆ ಸಹಮತ ವ್ಯಕ್ತ ಪಡಿಸಿದ ಅವರ ಶೀಮತಿ ಲಲಿತಕ್ಕ ಮತ್ತು ಮಕ್ಕಳು ಹಾಗೂ ಸೊಸೆಯರು ಅಭಿನಂದನೀಯರು.


ನಮ್ಮ ಸಮಾಜದಲ್ಲಿ ಈ ರೀತಿಯ ಸೇವಾಮನೋಭಾವದ ಸರಳ ಸಜ್ಜನರ ಸಂಖ್ಯೆ, ಸಮೂಹ ಹೆಚ್ಚು ಹೆಚ್ಚು ಬೆಳೆಯಲಿ ಎಂದು ಹಾರೈಸೋಣ.

A letter addressed by Mr.Kalagar Giri, Honourable Member of Shree Akhila Havyaka Mahasabha (R) Bangalore.

ಸೂಕ್ತ ವಿಚಾರ. ಪರಿಹಾರ ಕಾಣಬೇಕು. ಸಂಸ್ಥೆ ಬೆಳೆಯಬೇಕು. ಸಂಸ್ಥೆ ಬೆಳವಣಿಗೆಯಿಲ್ಲದೆ ನಿಂತ ನೀರಾಗಬಾರದು.
                                                                                                
                                                            Comment by Mr.Harihar S Bhat, Bangalore.

A letter addressed by Mr.Kalagar Giri, Honourable Member of Shree Akhila Havyaka Mahasabha (R) Bangalore.
ಅನ್ಯಾಯದ ವಿರುದ್ದ ಮತ್ತೊಂದು ಹೋರಾಟ.............

ಗೆ:
೧. ಶ್ರೀ ಜಿ ಕೆ ಭಟ್,
ಮುಖ್ಯ ಚುನಾವಣಾಧಿಕಾರಿಗಳು,
ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು.

೨. ಶ್ರೀ ,ಡಿ. ವಿ. ಹೆಗಡೆ,
ಗೌರವ ಪ್ರಧಾನ ಕಾರ್ಯದರ್ಶಿಗಳು
ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು

ಮಾನ್ಯರೇ,

ವಿಷಯ: ಮಹಾಸಭೆಯ ಪ್ರಸಕ್ತ ಸಾಲಿನ ಚುನಾವಣೆಯ ಬಗ್ಗೆ

ನಾನು ಹವ್ಯಕ ಮಹಾಸಭೆಯ ಸದಸ್ಯನಾಗಿದ್ದು ( ಸ.ಸಂ ....) ಮಹಾಸಭೆಯ ಸೆಪ್ಟೆಂಬರ್ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾದ ಚುನಾವಣಾ ಅಧಿಸೂಚನೆಯನ್ನು ಮತ್ತು ವೇಳಾಪಟ್ಟಿಯನ್ನು ಗಮನಿಸಲಾಗಿ, ಅದರಲ್ಲಿ ಈ ಕೆಳಗಿನ ಲೋಪದೋಷಗಳನ್ನು ತಮ್ಮ ಗಮನಕ್ಕೂ ತರಲು ಈ ಮೂಲಕ ಇಚ್ಚಿಸುತ್ತೇನೆ.
೧. ಸದರಿ ವೇಳಾಪಟ್ಟಿಯ ಪ್ರಕಾರ, ಚುನಾವಣಾ ದಿನಾಂಕದಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯ್ಹಾನ್ನ ೧.೩೦ ರ ವರೆಗೆ ಮತದಾನದ ಸಮಯವನ್ನು ನಿಗದಿಪಡಿಸಲಾಗಿದೆ. ನಮ್ಮ ಮಹಾಸಭೆಯಲ್ಲಿ ಸುಮಾರು ೧೫೦೦೦ ಕ್ಕೂ ಮಿಕ್ಕಿ ಮತದಾರರಿದ್ದು, ನಿಗದಿಪಡಿಸಿದ ವೇಳೆಯಲ್ಲಿ ಸಮಯಾವಕಾಶದ ಕೊರತೆಯಿಂದ ಮತದಾನಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ತಾವು ಸೂಕ್ತ ಸಂಖ್ಯೆಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯುವುದರ ಮೂಲಕ ಸೂಕ್ತ ಮತದಾನಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
೨. ಸದರಿ ಅಧಿಸೂಚನೆಯಲ್ಲಿ, ತಾವು ಚುನಾವಣೆಯ ಸ್ಥಳದ ವಿವರ ಮತ್ತು ಸ್ಥಾಪಿಸಲಾಗುವ ಮತದಾನ ಕೇಂದ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರುವುದು ಕಂಡುಬಂದಿರುವುದಿಲ್ಲ.
೩. ಮತದಾನಕ್ಕೆ ಸಂಬಂಧಿಸಿದಂತೆ, ಸದರಿ ಪತ್ರಿಕೆಯಲ್ಲಿ, ಪ್ರತಿ ಮತದಾರನಿಗೂ ಮತದಾನ ಮಾಡಲು ೬ ತಿಂಗಳೊಳಗಿನ ಹವ್ಯಕ ಪತ್ರಿಕೆ ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆಯ ಪ್ರತಿಯನ್ನು ತರಲು ಸೂಚಿಸಿದ್ದು ತಮ್ಮ ಗಮನಕ್ಕೆ ಈ ಮೂಲಕ ತರಬಯಸುತ್ತೇನೆ.
ಹವ್ಯಕ ಪತ್ರಿಕೆಯನ್ನು ಸದಸ್ಯರ ವಿಳಾಸಕ್ಕೆ ತಲುಪಿಸುವುದು ಹವ್ಯಕ ಮಹಾಸಭೆಯ ಜವಾಬ್ದಾರಿಯಾಗಿದ್ದು, ಸಾಮಾನ್ಯ ಅಂಚೆಯ ಮೂಲಕ ಕಳುಹಿಸಲಾಗುತ್ತದೆ. ಪತ್ರಿಕೆ ಯಾವುದೇ ಕಾರಣಕ್ಕೆ ತಲುಪದೇ ಇದ್ದು, ಅದನ್ನು ಮತದಾನದ ಸಮಯದಲ್ಲಿ ಹಾಜರುಪಡಿಸದೆ ಇದ್ದರೆ, ಮತದಾನದ ಹಕ್ಕನ್ನು ತಿರಸ್ಕರಿಸುವುದು ಸದಸ್ಯರ ಹಕ್ಕಿನ ಉಲ್ಲಂಘನೆಯಾಗಿರುತ್ತದೆ.
ಕೆಲವು ಸದಸ್ಯರು ನೋಂದಣೀ ಮಾಡುವಾಗ, ಸಭೆಯ ನಿಯಮಾವಳಿಗಳ ಪ್ರಕಾರ ಪತ್ರಿಕೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಅಥಾವ ಮನೆಯಲ್ಲಿ ಅನೇಕ ಜನ ಸದಸ್ಯರಿದ್ದು ತಮ್ಮ ಹೆಸರಿಗೆ ಪತ್ರಿಕೆ ಕಳುಹಿಸದಿರಲು ಕೋರಿರುತ್ತಾರೆ. ಅಂತಹ ಸದಸ್ಯರು ಮತದಾನದ ಸಮಯದಲ್ಲಿ ಪತ್ರಿಕೆಯನ್ನು ಹಾಜರುಪಡಿಸುವುದು ಅಸಾದ್ಯವಾಗಿರುತ್ತದೆ. ಈ ಕಾರಣಕ್ಕಾಗಿ ಮತದಾನದ ಹಕ್ಕನ್ನು ತಿರಸ್ಕರಿಸುವುದು ಕಾನೂನು ಬಾಹಿರವಾಗಿರುತ್ತದೆ.
ಹಾಗೆಯೇ, ಸದಸ್ಯತ್ವ ನೋಂದಣಿ ಮಾಡುವಾಗ, ಮಹಾಸಭೆಯು ಯಾವುದೇ ಸದಸ್ಯರ ಭಾವಚಿತ್ರ ಅಥವಾ ಗುರುತಿನ ದಾಖಲೆಯನ್ನು ಪಡೆದಿರುವುದಿಲ್ಲ. ಇಂತಹ ಸಂದರ್ಭದಲ್ಲಿ, ದಾಖಲೆಯ ಪ್ರತಿಯನ್ನು ಮೂಲ ಪ್ರತಿಯಿಲ್ಲದೇ ಗುರುತಿಸಲು ಅಸಾಧ್ಯ ಮತ್ತು ಒಂದೇ ರೀತಿಯ ಹೆಸರನ್ನು ಹೊಂದಿದ ವ್ಯಕ್ತಿಗಳು ತಮ್ಮ ಗುರುತಿನ ದಾಖಲೆಯ ಪ್ರತಿಯೊಂದಿಗೆ ಬಂದು ನಕಲಿ ಮತದಾನಕ್ಕೆ ಅವಕಾಶವಾಗುತ್ತದೆ.
೪. ಮಹಾಸಭೆಯು ೧೫೦೦೦ ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಭಾರತದಾದ್ಯಂತ ಮತ್ತು ಹೊರದೇಶಗಳಲ್ಲಿ ವಾಸಿಸುತ್ತಿದ್ದು, ಸೂಕ್ತ ಸಂಖ್ಯೆಗಳಲ್ಲಿ ಆಯಾ ಪ್ರಾಂತ್ಯವಾರು ಮತದಾನ ಕೇಂದ್ರಗಳ ಅವಶ್ಯಕತೆಯಿದ್ದು, ಆ ಬಗ್ಗೆ ಚುನಾವಣಾ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಹೊರಭಾಗಗಳ ಮತದಾರರಿಗೆ ಅಂಚೆ ಮತದಾನದಂತಹ ಸೂಕ್ತ ವ್ಯವಸ್ಥೆ ಮಾಡಲು ತಮ್ಮಲ್ಲಿ ವಿನಂತಿಸುತ್ತಿದ್ದೇನೆ.
ಈ ಮೇಲಿನ ಎಲ್ಲಾ ಅಂಶಗಳನ್ನು ತಾವು ಕೂಲಂಕುಷವಾಗಿ ಪರಿಶೀಲಿಸಿ, ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡು, ಮುಕ್ತ ನಿರ್ಭೀತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕಾಗಿ ಒತ್ತಾಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಮತ್ತು ಈ ಮೇಲಿನ ಸಮಸ್ಯೆಗಳಿಗೆ ಕೈಗೊಂಡ ಕ್ರಮಗಳ ಬಗ್ಗೆ ದಿನಾಂಕ ೧೫/೧೦/೨೦೧೩ ರ ಒಳಗಾಗಿ ಸೂಕ್ತವಾದ ಲಿಖಿತ ಉತ್ತರವನ್ನು ತಮ್ಮಿಂದ ಬಯಸುತ್ತೇನೆ.

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಚುನಾವಣೆ 2013.

ಮಿತ್ರರೇ, 

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಚುನಾವಣೆ ನಿರ್ಧಾರವಾಗಿದೆ. ದಿನಾಂಕ ೨೦-೧೦-೨೦೧೩ , ಭಾನುವಾರದಂದು . ಸ್ಥಳ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದ ಸಭಾಂಗಣ , ೪ ನೇ ಮುಖ್ಯ ರಸ್ತೆ, ೧೩ ನೇ ಅಡ್ಡ ರಸ್ತೆ , ಮಲ್ಲೇಶ್ವರ , ಬೆಂಗಳೂರು. ಬೆಳಿಗ್ಗೆ ೧೦ ಗಂಟೆಗೆ. 

ಮತ ಚಲಾಯಿಸಲು ತಾವು ಕಡ್ಡಾಯವಾಗಿ ನಿಮ್ಮ ಹೆಸರಿನಲ್ಲಿ ಬಂದ ಕಳೆದ ಆರು ತಿಂಗಳುಗಳೊಳಗಿನ ಹವ್ಯಕ ಮಾಸ ಪತ್ರಿಕೆಯೊಂದನ್ನು ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆ, ( ಸರಕಾರದ ಮತದಾರರ ಗುರುತಿನ ಚೀಟಿ, ಅಧಾರ ಕಾರ್ಡ್ , ರೇಶನ್ ಕಾರ್ಡ್ , ಪಾನ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್ , ಇತ್ಯಾದಿ ಯಾವುದಾದರೊಂದನ್ನು ) ತರಬೇಕು . ( ಝೆರೊಕ್ಷ ಕಾಪಿಯೊಂದನ್ನೂ ತನ್ನಿ ).

ತಮಗೆಲ್ಲ ತಿಳಿದಿರುವಂತೆ ನಾನು ಒಬ್ಬ ಅಭ್ಯರ್ಥಿ. ತಾವೆಲ್ಲ ನನಗೆ ಒಂದು ಮತ ನೀಡಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ತಾವು ಮತ ನೀಡಿ ನನಗೆ ನಿರ್ದೇಶಕ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನನ್ನ ಮುಂದಿರುವ ಕನಸುಗಳು / ಯೋಜನೆಗಳು ಇಂತಿವೆ :

೧. ಎಲ್ಲ ನಿರ್ದೇಶಕರ ಸಹಕಾರ ಕೋರಿ ನಾನು ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೆ ನಮ್ಮ ಹವ್ಯಕರಿರುವ ಎಲ್ಲ ಪ್ರದೇಶದ ನಿರ್ದೇಶಕರಿಗೂ ಬೇರೆ ಬೇರೆ ಸೂಕ್ತ ಹುದ್ದೆಗಳನ್ನು ನೀಡಿ ಎಲ್ಲರ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತೇನೆ. ಮತ್ತು

೨. ಹಾಲಿ ಅಧ್ಯಕ್ಷರು ಕೈಗೆತ್ತಿಕೊಂಡಿರುವ ಕಟ್ಟಡದ ಕಾರ್ಯವನ್ನು ಎಲ್ಲ ಸದಸ್ಯರು, ನಿರ್ದೇಶಕರು, ಸಮಾಜದ ಗಣ್ಯ ವ್ಯಕ್ತಿಗಳು ... ಮುಂತಾದವರ ಸಹಕಾರದೊಂದಿಗೆ ಪೂರ್ಣಗೊಳಿಸುತ್ತೇನೆ.

೩. ಮಹಾಸಭೆಯ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಂಪೂರ್ಣ ಪಾರದರ್ಶಕತೆ ಕಾಯ್ದು ಕೊಳ್ಳುತ್ತೇನೆ. ಗೌರವಾನ್ವಿತ ಯಾವುದೇ ಸದಸ್ಯರು ಯಾವುದೇ ಮಾಹಿತಿ ಪಡೆಯಬಯಸಿದಲ್ಲಿ ಸೂಕ್ತ ಸಮಯದಲ್ಲಿ ದೊರೆಯುವ ವ್ಯವಸ್ಥೆ , ಎಲ್ಲ ನಿರ್ದೇಶಕರ ಸಹಕಾರದೊಂದಿಗೆ , ಏರ್ಪಾಡು ಮಾಡುತ್ತೇನೆ.

೪. ಬೆಂಗಳೂರಿನಿಂದ ಹೊರಗೆ ವಾಸ್ತವ್ಯವಿರುವ ನಿರ್ದೇಶಕರು ಎಲ್ಲ ಕಾರ್ಯ ಕಲಾಪಗಳಲ್ಲಿ ಹಾಜರಿರಲು ಅವರ ವಾಸ್ತವ್ಯದ ಸಮೀಪದ ರೈಲು ನಿಲ್ದಾಣದಿಂದ ಮಹಾಸಭೆಗೆ ಬರಲು ಟಿಕೆಟ್ ವ್ಯವಸ್ಥೆಯನ್ನು , ನಿರ್ದೇಶಕರೆಲ್ಲರ ಸಹಕಾರ , ಸಮ್ಮತಿಯೊಡನೆ ಏರ್ಪಾಡುಮಾಡಬಯಸುತ್ತೇನೆ.

೫. ಮಹಾಸಭೆಯ ಅಭಿವೃದ್ಧಿಗೆ ಕೈ ಜೋಡಿಸಬಯಸುವ ಪ್ರತಿಯೊಬ್ಬ ಸದಸ್ಯರಿಗೂ ಮುಕ್ತ ಅವಕಾಶ ಕಲ್ಪಿಸಲು ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ವ್ಯವಸ್ಥೆ ಮಾಡುತ್ತೇನೆ.

೬. ಮಹಾಸಭೆಯ ಎಲ್ಲ ಕಾರ್ಯಕ್ರಮಗಳ - ಹಣಕಾಸಿಗೆ ಸೂಕ್ತ ಜಾಹೀರಾತು, ದೇಣಿಗೆ ಪಡೆದು ಮಹಾಸಭೆಯ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆಯಾಗದಂತೆ ವ್ಯವಸ್ಥೆ ಗೊಳಿಸುವತ್ತ ನಿರ್ದೇಶಕರೆಲ್ಲ ಸಲಹೆ ಸೂಚನೆ ಪಡೆದು ಕಾರ್ಯಪೃವೃತ್ತನಾಗುತ್ತೇನೆ.

೭. ನಮ್ಮ ಹವ್ಯಕ ಸಮಾಜದ ಸದಸ್ಯರೆಲ್ಲ ವಿವಿಧ ಉದ್ಯೋಗಗಳಲ್ಲಿ ವಿವಿಧ ಪ್ರದೇಶಗಳಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಹವ್ಯಕರೆಲ್ಲರ ಗಣತಿ ಕಾರ್ಯ ಕೈಗೊಂಡು , ಅವರವರ ಉದ್ಯೋಗಾನುಸಾರ ಮಾಹಿತಿ ಕ್ರೋಢಿಕರಿಸಲು ಆನ್ಲೈನ್ ( online ) ವ್ಯವಸ್ಥೆ ಮಾಡುವತ್ತ ನಿರ್ದೇಶಕರ ಸಹಾಯ, ಸಹಕಾರ ಪಡೆಯುತ್ತೇನೆ.

೮. ಒಂದು ೪೦ x ೬೦ ಸೈಟ್ ಬೆಂಗಳೂರಿನಲ್ಲಿ ಮಹಾಸಭೆಯ ಹೆಸರಿನಲ್ಲಿ ದಾನ ಪಡೆದು / ಸರಕಾರದಿಂದ ಪಡೆದು / ಖರೀದಿಸಿ ಆರ್ಥಿಕವಾಗಿ ಬಲಾಢ್ಯರಾಗಿರುವ ದೊಡ್ಡ ದೊಡ್ಡ ಖಾಸಗಿ ಕ್ಷೇತ್ರದ ಕಂಪನಿಗಳನ್ನು / ಸರಕಾರೀ , ಅರೆ ಸರಕಾರೀ ಕ್ಷೇತ್ರದ ಗಣ್ಯರನ್ನು / ನಮ್ಮ ಸಮಾಜದ ಅರ್ಥಿಕ ಬಲಾಡ್ಯರನ್ನು , ಎಲ್ಲ ನಿರ್ದೇಶಕರ ಸಹಾಯ , ಸಹಕಾರದೊಂದಿಗೆ ಕಾಡಿ, ಬೇಡಿ ಅವರ ಪ್ರಾಯೋಜಕತ್ವದಿಂದ ಒಳ್ಳೆಯ ಆದಾಯ ತರುವ ಒಂದು ಉತ್ತಮ ಸಭಾಭವನ, ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದಿರುವ ವಿಧ್ಯಾರ್ಥಿಗಳಿಗಾಗಿ ಒಂದು ನೂರು ಮಕ್ಕಳು ಇರಬಲ್ಲ ಉಚಿತ ವಿಧ್ಯಾರ್ಥಿಭವನ ( free hostel ) , ಹಳ್ಳಿಗಳಿಂದ ಬರುವ ಹವ್ಯಕರಿಗೆ ನಾಲ್ಕು ದಿನ ಉಚಿತವಾಗಿ ತಂಗಲು ಒಂದು ನೂರು ರೂಂ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವದು.

ಮಿತ್ರರೇ, ಈ ಎಲ್ಲ ಕನಸುಗಳು ನನಸಾಗಲು ತಮ್ಮ ಪ್ರಯತ್ನ ಬಹು ಮುಖ್ಯವಾದುದು. ಆದ್ದರಿಂದ ನಾನು ನಿರ್ದೇಶಕನಾಗಿ ಆಯ್ಕೆಯಾಗಲು ನಿಮಗೆ ಪರಿಚಯವಿರುವ , ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಸದಸ್ಯತ್ವವಿರುವ ಎಲ್ಲರನ್ನು ಸಂಪರ್ಕಿಸಿ , ಅವರೆಲ್ಲ ನನಗೆ ವೋಟು ಮಾಡುವಂತೆ ಪ್ರಯತ್ನ ಮಾಡಬೇಕಾಗಿ ಸವಿನಯ ವಿನಂತಿ.

Harihar S Bhat , Bangalore.
October 11, 2013.